ಬಂಟ್ವಾಳ, ಜೂ. 11 (DaijiworldNews/SM): ಟ್ಯಾಂಕರ್ ಚಾಲಕನೋರ್ವನ ಮೇಲೆ ಆರೋಪಿಯೊಬ್ಬ ಹಲ್ಲೆ ನಡೆಸಿ ಪರಾರಿಯಾದ ಘಟನೆ ತಾಲೂಕಿನ ಬ್ರಹ್ಮರಕೋಟ್ಲು ಟೋಲ್ ಗೇಟ್ ಸಮೀಪ ಶುಕ್ರವಾರ ಸಂಜೆ ವೇಳೆ ನಡೆದಿದೆ.
ಬಿಕರ್ನಕಟ್ಟೆ ಸಮೀಪದ ಮರೋಳಿ ಗ್ರಾಮದ ಕುಲಶೇಖರ ಬಿಜ್ಜೂಡಿ ನಿವಾಸಿ ಜಾರ್ಜ್ ರೋಡ್ರಿಗಸ್ ಹಲ್ಲೆಗೊಳಗಾದವರು. ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಹಲ್ಲೆ ನಡೆಸಿ ಅವ್ಯಾಚ್ಚ ಶಬ್ದಗಳಿಂದ ಬೈದು ಪರಾರಿಯಾಗಿದ್ದಾನೆ ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಂಗಳೂರಿನಲ್ಲಿರುವ ಇನಿತ್ ಕುಮಾರ ಜಲನ್ ರವರ ಕಂಪನಿಯಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿರುವ ರೋಡ್ರಿಗಸ್ ಅವರು ಜೂನ್ 10 ರಂದು ಕೊಯಮುತ್ತೂರಿನಿಂದ ಹೊರಟು ಈ ದಿನ ಜೂನ್ 11 ರಂದು ಸಂಜೆ ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಬ್ರಹ್ಮರಕೋಟ್ಲು ಟೋಲ್ ಗೇಟ್ ಎಂಬಲ್ಲಿ ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಲಾರಿಯ ಹಿಂದಿನಿಂದ ಬಂದ ಯುವಕ ಲಾರಿಯನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಚಾಲಕ ಶೀಟಿನಲ್ಲಿದ್ದ ರೋಡ್ರಿಗಸ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್, ಅಪರಾಧ ವಿಭಾಗದ ಎಸ್ಐ. ಕಲೈಮಾರ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.