ಮಂಗಳೂರು, ಜೂ. 11 (DaijiworldNews/SM): ಕೊರೋನಾ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆ ಸೇರಿದಂತೆ ಇತರ ಹನ್ನೊಂದು ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಿ ಈಗಾಗಲೇ ಆದೇಶ ನೀಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಸದ್ಯ ಯಾವುದೇ ವೀಕೆಂಡ್ ಕರ್ಫ್ಯೂ ಇಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಆದೇಶ ನೀಡಿದ್ದಾರೆ.
ದ.ಕ ಜಿಲ್ಲಾಡಳಿತ ಹೊಸ ಗೈಡಲೈನ್ಸ್ ನಲ್ಲಿ ಏನಿದೆ?
ಈ ಹಿಂದಿನಂತೆ ಬೆಳಿಗ್ಗೆ 6ರಿಂದ ಬೆಳಿಗ್ಗೆ 10 ಗಂಟೆ ತನಕ ಅಗತ್ಯ ವಸ್ತು ಖರೀದಿಗೆ ಅವಕಾಶ
ವಾಹನ ಶೋ ರೂಂಗಳಿಗೆ ಅವಕಾಶ ಇಲ್ಲ
ಗ್ಯಾರೇಜ್ಗಳು, ಅಧಿಕೃತ ಸರ್ವಿಸ್ ಸೆಂಟರ್ ಗಳಿಗೆ ಅವಕಾಶ
ಮಧ್ಯಾಹ್ನ 12 ಗಂಟೆ ತನಕ ಗ್ಯಾರೇಜ್, ಸರ್ವಿಸ್ ಸೆಂಟರ್ ಗೆ ಅವಕಾಶ
ಕನ್ನಡಕದ ಅಂಗಡಿ ಮಧ್ಯಾಹ್ನ 12 ಗಂಟೆ ತನಕ ತೆರೆಯಬಹುದು
ಇನ್ನುಳಿದಂತೆ ದ.ಕ ಜಿಲ್ಲೆಯಲ್ಲಿ ಯಾವುದಕ್ಕೂ ಅನುಮತಿ ಇಲ್ಲ
ಜೂ. 21ರ ತನಕ ಹೊಸ ಆದೇಶ ಜಾರಿಯಲ್ಲಿರುತ್ತದೆ
ದೈಜಿವರ್ಲ್ಡ್ ವಾಹಿನಿಗೆ ದ.ಕ ಜಿಲ್ಲಾಧಿಕಾರಿ ಮಾಹಿತಿ