ಕಾರ್ಕಳ, ಜೂ.11 (DaijiworldNews/HR): ಮುಂಡ್ಕೂರು ದೇವಸ್ಥಾನ ಬಳಿಯ ಅಂಗಡಿಗುತ್ತು ಶಾಂಭವಿ ಹೊಳೆಯಲ್ಲಿ ಎಂಬಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಮರಳಗಾರಿಕೆ ಅಡ್ಡೆಗೆ ವಿರುದ್ಧ ಕಾರ್ಕಳ ಕಂದಾಯ ಇಲಾಖೆಯ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದೆ.
ಕಾರ್ಕಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ಶಿವ ಪ್ರಸಾದ್ ನೇತೃತ್ವದಲ್ಲಿ ನಡೆದ ಈ ಕಾರ್ಯಚರಣೆಯ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿ ಪ್ರಸ್ತುತ ಯಾವುದೇ ರೀತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯದೇ ಇರುವ ಅಂಶ ಬೆಳಕಿಗೆ ಬಂದಿದ್ದು, ಈ ಹಿಂದೆ ನಡೆಸುತ್ತಿದ್ದ ಅಕ್ರಮ ಮರಳುದಂಧೆಯ ಕುರುಹುಗಳು ಅಭಿಸಿದೆ.
ಇದೇ ಅಕ್ರಮ ಮರಳುಗಾರಿಕೆಯ ಮೇಲೆ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕಂದಾಯ ಇಲಾಖೆ ಹಾಗೂ ಭಾರತೀಯ ಭೂ ಮತ್ತು ಗಣೆ ಇಲಾಖೆಯು ಜಂಟೀಯಾಗಿ ಕಾರ್ಯಚರಣೆ ನಡೆಸಿದ ರೂ. 35 ಸಾವಿರ ದಂಡ ವಿಧಿಸಿ ಅಕ್ರಮ ಮರಳುಗಾರಿಕೆ ನಡೆಸುವವರಿಗೆ ಎಚ್ಚರಿಕೆ ನೀಡಲಾಗಿತ್ತು. ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ದೂರಿನನ್ವಯ ಜಿಲ್ಲಾಧಿಕಾರಿಯವರ ಸೂಚನೆಯಂತೆ ಈ ಕಾರ್ಯಚರಣೆ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಕುಂದಾಪುರ ಸಹಾಯಕ ಕಮಿಷನರ್ ನೇತೃತ್ವದಲ್ಲಿ ಮರ್ಣೆ ಅಜೆಕಾರಿದ ಮಧುರ ನಗರದ ಸ್ವರ್ಣ ಹೊಳೆಯಲ್ಲಿ ನಡಯುತ್ತಿದ್ದ ಅಕ್ರಮ ಮರಳುಗಾರಿಕೆಯ ವಿರುದ್ಧ ಕಾರ್ಯಚರಣೆ ನಡೆಸಿ ಅಕ್ರಮ ದಂಧೆಗೆ ಬಳಸಲಾಗಿದ್ದ ಡ್ರೆಜ್ಜಿಂಗ್ ಬೋಟ್, ಒಂದು ಟಪ್ಪರ್, 10 ಟನ್ ಮರಳನ್ನು ವಶಪಡಿಸಲಾಗಿತ್ತು. ತಾಲೂಕಿನಲ್ಲಿ ಯಾವುದೇ ಅಕ್ರಮ ಮರಳು ಗಾಣಿಗರಿಕೆ ನಡೆಯದಂತೆ ನಿಗಾ ವಹಿಸಲಾಗುವುದು ಎಂದು ಕಂದಾಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.