ಉಡುಪಿ, ಜೂ 11 (DaijiworldNews/MS): ಪೆಟ್ರೋಲ್ ಬಂಕ್ ಕೆಲಸಕ್ಕಿದ್ದ ಮ್ಯಾನೇಜರ್ ಓರ್ವ ಬಂಕ್ ಮಾಲಕರಿಗೆ 18 ಲಕ್ಷ ರೂಪಾಯಿ ನಗದು ವಂಚಿಸಿರುವ ಘಟನೆ ಮೂಳೂರಿನಲ್ಲಿ ನಡೆದಿದೆ. ವಂಚನೆ ಎಸಗಿದಾತನನ್ನು ಸುಖೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ಕೆ. ದೀಪಕ್ರಾಜ್ ಶೆಟ್ಟಿ ಎಂಬವರ ಮಾಲೀಕತ್ವದ ಭಾರತ್ ಪೆಟ್ರೋಲ್ ಬಂಕ್ನಲ್ಲಿ ಹಣಕಾಸಿನ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಸುಖೇಶ್ ಶೆಟ್ಟಿ ವಿರುದ್ದ ಇದೀಗ ವಂಚನೆ ಪ್ರಕರಣ ದಾಖಲಿಸಲಾಗಿದೆ.
ಪೆಟ್ರೋಲ್ ಬಂಕ್ನ ಕಾರ್ಡ್ ಹಾಗೂ ನಗದು ವ್ಯವಹಾರದ ಹಣವನ್ನು ಆರೋಪಿ ಬ್ಯಾಂಕ್ಗೆ ಜಮಾ ಮಾಡಿಕೊಂಡು ಬರುತ್ತಿದ್ದನು. ಹೀಗೆ ಜಮಾ ಮಾಡಿದ ಹಣದಲ್ಲಿ ವ್ಯತ್ಯಾಸ ಕಂಡು ಬಂದ ಪರಿಣಾಮ ಕಂಪೆನಿಯ ಸಿಬ್ಬಂದಿಗಳು ಮಾಲಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಸುಖೇಶ್ ಶೆಟ್ಟಿ ಮೇ 27ರಂದು ಸಂಜೆಯ ಬಳಿಕ ತನ್ನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ತೆರಳಿದ್ದನು.
ಬಳಿಕ ಮೇ 28ರಂದು ಪೆಟ್ರೋಲ್ ಬಂಕ್ಗೆ ಬಂದು ನೋಡುವಾಗ ಬ್ಯಾಂಕ್ ಸ್ಟೇಟ್ಮೆಂಟ್, ಸೇಲ್ಸ್ ರಿಪೋರ್ಟ್, ಕಾರ್ಡ್ನ ಸ್ಟೇಟ್ಮೆಂಟ್ ಹಾಗೂ ಸೇಲ್ಸ್ ರಿಪೋರ್ಟ್ ನಲ್ಲಿ 18 ಲಕ್ಷ ರೂ. ವರೆಗೆ ರೂ. ವ್ಯತ್ಯಾಸ ಕಂಡುಬಂದಿತ್ತು.
ಆರೋಪಿತ ಸುಖೇಶ್ ಪೆಟ್ರೋಲ್ ಬಂಕ್ನ ಹಣವನ್ನು ಬ್ಯಾಂಕ್ಗೆ ಜಮಾ ಮಾಡದೆ ಮೋಸ ಮಾಡಿ ಪೆಟ್ರೋಲ್ ಬಂಕ್ನ ವ್ಯವಹಾರದಲ್ಲಿ 18 ಲಕ್ಷ ರೂಪಾಯಿಯನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಮೋಸ ಮಾಡಿರುವುದಾಗಿ ಬಂಕ್ನ ಮಾಲಕ ದೀಪಕ್ರಾಜ್ ಶೆಟ್ಟಿ ನೀಡಿದ ದೂರಿನಂತೆ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ