ಕಾರ್ಕಳ, ಜೂ.10 (DaijiworldNews/HR): ಪುಟ್ಟ ಮಕ್ಕಳು ಹಾಗೂ ಗರ್ಭಿಣಿ ಮತ್ತು ಬಾಣಂತಿ ಸ್ರೀಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹತ್ವದ ಜವಾಬ್ದಾರಿಯನ್ನು ಹೊಂದಿದ ಅಂಗನವಾಡಿ ಶಿಕ್ಷಕರು ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿಯನ್ನು ವಹಿಸಿಕೊಳ್ಳಬೇಕು ನಿಮ್ಮ ಸಹಾಯಕ್ಕೆ ನಾವೆಲ್ಲರೂ ಸದಾ ಸಿದ್ದ ಎಂದು ಪುರಸಭೆಯ ಮುಖ್ಯಾಧಿಕಾರಿಯವರು ರೂಪಾ ಜೆ.ಶೆಟ್ಟಿ ಹೇಳಿದರು.
ಪುರಸಭಾ ಸದಸ್ಯ ಶುಭದ ರಾವ್ ಇವರ ವತಿಯಿಂದ ಪುರಸಭಾ ವ್ಯಾಪ್ತಿಯ ಅಂಗನವಾಡಿ ಶಿಕ್ಷಕರಿಗೆ ನೀಡಿದ ಆಹಾರ ಕಿಟ್ ಅನ್ನು ವಿತರಿಸಿ ಮಾತನಾಡಿದರು.
ಶಿಕ್ಷಕರಿಗೆ ಮಾಸ್ಕ್, ಸ್ಯಾನಿಟೈಸರ್, ಕಿಟ್ಟ್ ವಿತರಿಸಿ ಮಾತನಾಡಿದ ಶುಭದ ರಾವ್ ಮಕ್ಕಳ ಬೆಳವಣಿಗೆಯಲ್ಲಿ ಅಂಗನವಾಡಿ ಶಿಕ್ಷಕರ ಪಾತ್ರ ಮಹತ್ವದ್ದು ನಿಮಗೆ ಸಹಕಾರ ನೀಡುವುದು ನಮ್ಮ ಕರ್ತವ್ಯ, ನಿಮಗೆ ಸಹಕರಿಸುವ ಅಂಗನವಾಡಿ ಸಹಾಯಕಿಗೂ ಮುಂದಿನ ದಿನದಲ್ಲಿ ಕಿಟ್ಟ್ ವಿತರಿಸಲಿದ್ದೇವೆ. ಸಂಕಷ್ಟದ ಸಂದರ್ಭದಲ್ಲಿ ನಿಮ್ಮ ಸೇವೆಯಲ್ಲಿ ನಾವಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಕಂದಾಯ ಅಧಿಕಾರಿ ಸಂತೋಷ್, ಪತ್ರಿಕಾ ಛಾಯಾಗ್ರಹಕ ದ್ವಾರಕ ನಿರಂಜನ್, ಉದ್ಯಮಿಗಳಾದ ನವೀನ್ ರಾವ್, ಸುರೇಶ್ ಕೋಟ್ಯಾನ್, ಪ್ರಶಾಂತ್ ಶೆಟ್ಟಿ ಹಾಗೂ ಸುಕೇಶ್ ಕೋಟ್ಯಾನ್ ಉಪಸ್ಥಿತಿತರಿದ್ದರು.