ಕಾರ್ಕಳ, ಜೂ.10 (DaijiworldNews/HR): ಕರ್ನಾಟಕ ಕರಾವಳಿಯ ಯಕ್ಷಗಾನ ಭಕ್ತಿಯ ಕಲೆ ಜೊತೆಗೆ ಬದುಕುವ ಕಲೆಯೂ ಆಗಿದೆ. ಬಣ್ಣದ ಬೆಳಕಿನಲ್ಲಿ ಬಣ್ಣ ಬಣ್ಣದ ವೇಷ ಭೂಷಣದೊಂದಿಗೆ ರಾರಾಜಿಸುತ್ತಿರುವ ಕಲಾವಿದರ ಬದುಕನ್ನು ಬದುಕಿಸಲು ಯಕ್ಷದ್ರುವ ಪಟ್ಲ ಫೌಂಡೇಶನ್ ಕಾರಣವಾಗಿದೆ ಎಂದು ಕಾರ್ಕಳದ ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಹೇಳಿದರು.
ಮಂಗಳೂರಿನ ಪಟ್ಲ ಪೌಂಡೇಶನ್ ಟ್ರಸ್ಟ್ ವತಿಯಿಂದ ಕೊರೊನಾ ಸೋಂಕಿಗೆ ಸಂಕಷ್ಟಕ್ಕೀಡಾದ ಕಲಾವಿದರಿಗೆ ಕಾರ್ಕಳ ಘಟಕದ ಮೂಲಕ ಕೊಡಮಾಡಿದ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.
ಕೊಟ್ಟ ಪಡಿತರ ಕೊನೆ ತನಕ ವಲ್ಲದಿದ್ದರೂ ತಮ್ಮ ಜೀವನದೊಂದಿಗೆ ನಾವಿದ್ದೇವೆ ತಾವು ಯಾರೂ ದೃತಿಗೆಡಬಾರದು ದೈರ್ಯದಿಂದಿರಬೇಕೆಂದು ಟ್ರಸ್ಟ್ ನ ಸ್ಥಾಪಕಾದ್ಯಕ್ಷ ಪಟ್ಲ ಸತೀಶ್ ಶೆಟ್ಟಯವರ ಚಿಂತನೆ ಯಾಗಿದೆ. ಹಾಗಾಗಿ ಎಲ್ಲ ಕಲಾವಿದರು ಬಂದಿರುವ ಕರೋನಾ ವನ್ನು ಆದಷ್ಟು ಬೇಗನೆ ನಿರ್ಮೂಲನೆಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿಕೊಂಡು ಸಂತೋಷದ ಜೀವನ ಸಾಗಿಸಿ ಎಂದು ಹಾರೈಸಿದ ಶಾಸಕ ಸುನೀಲ್ಕುಮಾರ್ ಇದೇ ಸಂದರ್ಭದಲ್ಲಿ ಕಾರ್ಲ ಬ್ರಾಂಡ್ ನ ಬಿಳಿ ಬೆಂಡೆ ಬೀಜವನ್ನೂ ವಿತರಿಸಿದರು.
ಕಾರ್ಕಳ ಘಟಕದ ಅದ್ಯಕ್ಷ ವಿಜಯ ಶೆಟ್ಟಿ ಅಧ್ಯಕ್ಷತೆವಹಿಸಿದರು. ಸದಸ್ಯರುಗಳಾದ ಪ್ರಾಚಾರ್ಯ ಬೇಬಿ ಕೆ. ಈಶ್ವರಮಂಗಲ, ಕಾರ್ಕಳ ತಾಲೂಕಿನ ಬಂಟರ ಮಹಿಳಾ ಸಂಘದ ಅದ್ಯಕ್ಷೆ ಸವಿತಾ ವಿ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅದ್ಯಕ್ಷ ವಿಖ್ಯಾತ್ ಶೆಟ್ಟಿ ಉಪಸ್ಥಿತರಿದ್ದರು.