ಮಂಗಳೂರು, ಜೂ 10 (DaijiworldNews/MS): ಕೊಂಕಣಿ ಅಕಾಡೆಮಿಯಲ್ಲಿ ಇದ್ದ ನಿರುಪಯೋಗಿ ವಾಹನವೊಂದನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಸೇವಾಂಜಲಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಂಬುಲೆನ್ಸ್ ಆಗಿ ಪರಿವರ್ತಿಸಲಾಯಿತು.
ಸೇವಾಂಜಲಿ ಚಾರಿಟಬಲ್ ಟ್ರಸ್ಟ್ ಈ ವಾಹನವನ್ನು ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿದ್ದು, ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಮತ್ತು ರೋಗಿಗಳು ಮೃತಪಟ್ಟರೆ ಉಚಿತವಾಗಿ ಸೇವೆ ಒದಗಿಸಲು ಬಳಸಲಾಗುವುದು.
ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರ ಒಪ್ಪಿಗೆ ಮೇರೆಗೆ ಗುರುವಾರ ಈ ವಾಹನ ಹಸ್ತಾಂತರಿಸಲಾಯಿತು. ಸೇವಾಂಜಲಿ ಟ್ರಸ್ಟ್ ನ ವತಿಯಿಂದ ಹನುಮಂತ ಕಾಮತ್, ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್, ಕೊಂಕಣಿ ಅಕಾಡೆಮಿ ಪರವಾಗಿ ಸದಸ್ಯರಾದ ಅರುಣ್ ಜಿ ಶೇಟ್, ಗೋಪಾಲಕೃಷ್ಣ ಭಟ್, ಕೆನ್ಯೂಟ ಜೀವನ್ ಪಿಂಟೋ, ನವೀನ್ ನಾಯಕ್ ಹಾಗೂ ರಿಜಿಸ್ಟ್ರಾರ್ ಮನೋಹರ್ ಕಾಮತ್ ಇದ್ದರು