ಮಂಗಳೂರು 09 (DaijiworldNews/MS): ಖಾಸಗಿ ಟೆಲಿವಿಷನ್ ಚಾನೆಲ್ನಲ್ಲಿ ಪ್ರಸಾರವಾದ ಕಾರ್ಯಕ್ರಮದ ಆಡಿಯೋ ತಿರುಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿ ಮಂಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗೆ ಖಾಸಗಿ ಟಿವಿ ವಾಹಿನಿಯೊಂದರಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭಾಗಹಿಸಿದ್ದು ನೇರಪ್ರಸಾರದ ಕಾರ್ಯಕ್ರಮದಲ್ಲಿ ವೀಕ್ಷಕರು ಕರೆ ಮಾಡಿ ಮಾತನಾಡಬಹುದಿತ್ತು. ಈ ಕಾರ್ಯಕ್ರಮದ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯುವತಿಯೋರ್ವಳು ಕರೆ ಮಾಡಿ ಮಾತನಾಡಿ ಸಂಸದರನ್ನು ನಿಂದಿಸುವುದು ಆ ವಿಡಿಯೋ ತುಣುಕಿನಲ್ಲಿತ್ತು. ಕಾರ್ಯಕ್ರಮ ನೈಜ ಆಡಿಯೋ ಬಳಕೆ ಮಾಡದೆ ಆಡಿಯೋ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು.
ಇದೇ ವಿಚಾರವಾಗಿ ಸುನಿಲ್ ಬಜಿಲಕೇರಿ ಬಂಧನವಾಗಿದೆ ಎಂದು ತಿಳಿದುಬಂದಿದೆ. ಆದರೆ ಪೊಲೀಸರು ಸಾಮಾಜಿಕ ಕಾರ್ಯಕರ್ತರನ್ನು ವಶಕ್ಕೆ ಪಡೆದ ಬಗ್ಗೆ ಖಚಿತಪಡಿಸಿಲ್ಲ. ಆದರೆ ಪೇಸ್ ಬುಕ್ ಮೂಲಕ ಲೈವ್ ಬಂದ ಸುನೀಲ್ ಪೊಲೀಸರು ತಮ್ಮನ್ನು ವಿಚಾರಣೆ ನಡೆಸಲು ಬಂಧಿದ್ದಾರೆ ಎಂದು ಹೇಳಿಕೊಂಡಿದ್ದಾರೆ.