ಕುಂದಾಪುರ, ಜೂ 8 (DaijiworldNews/MS): ಯಡಮೊಗೆಯ ಉದಯ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಕೊಲೆಗೆ ಕುಮ್ಮಕ್ಕು ನೀಡಿದ ಆರೋಪ ಹೊತ್ತಿದ್ದು, ಬಿಜೆಪಿ ಪ್ರಭಾವಿ ನಾಯಕ ಬಾಲಚಂದ್ರ ಭಟ್ ಮತ್ತು ರಾಜೇಶ್ ಭಟ್ ಎಂದು ಗುರುತಿಸಲಾಗಿದೆ.
ಜೂನ್ 5 ರಂದು ರಾತ್ರಿ 8 ಗಂಟೆ ಸುಮಾರಿಗೆ ಉದಯ ಅವರ ಮೇಲೆ ಯಡಮೊಗೆಯ ಹೊಸಬಾಳಿನಲ್ಲಿ ಕಾರು ಹತ್ತಿಸಿ, ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು. ಪ್ರಮುಖ ಆರೋಪಿ ಯಡಮೊಗೆ ಗ್ರಾಂ.ಪ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ನನ್ನು ಭಾನುವಾರವೇ ಬಂಧಿಸಲಾಗಿತ್ತು.
ಕೊಳವೆ ಬಾವಿ ವಿಚಾರದಲ್ಲಿ ಉಂಟಾದ ವೈಮನಸ್ಸು ಹಾಗೂ ಲಾಕ್ಡೌನ್ಗೆ ಸಂಬಂಧಿಸಿದಂತೆ ಉದಯ್ ಅವರು ವಾಟ್ಸ್ಆಪ್ನಲ್ಲಿ ಹಾಕಿದ ಸ್ಟೇಟಸ್ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಕೊಲೆ ನಡೆದ ವೇಳೆ ಈ ಮೂವರಲ್ಲದೇ ಇನ್ನಷ್ಟು ಮಂದಿ ಸ್ಥಳದಲ್ಲಿದ್ದರೆನ್ನುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.