ಕಾಸರಗೋಡು, ಜೂ 8 (DaijiworldNews/MS): ನಾಮಪತ್ರ ಹಿಂಪಡೆಯಲು ಬಿ ಎಸ್ ಪಿ ಅಭ್ಯರ್ಥಿಗೆ ಹಣ ನೀಡಿದ ದೂರಿನಂತೆ ಬಿಜೆಪಿ ಕೇರಳ ಘಟಕ ಅಧ್ಯಕ್ಷ ಕೆ ಸುರೇಂದ್ರನ್ ವಿರುದ್ಧ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚುನಾವಣೆಯನ್ನು ಬುಡಮೇಲು ಗೊಳಿಸುವ ಯತ್ನದಡಿ ಪ್ರಕರಣ ದಾಖಲಿಸಲಾಗಿದೆ. ಸುರೇಂದ್ರನ್ ನನ್ನು ಬಂಧಿಸಲು ನ್ಯಾಯಾಲಯದ ವಾರಂಟ್ ಅಗತ್ಯ ಎಂದು ನ್ಯಾಯಾಲಯ ತಿಳಿಸಿದೆ.
ಅಪಹರಣ , ದಿಗ್ಬಂಧನ , ಬೆದರಿಕೆ ಯೊಡ್ಡಿದ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ . ಇದಲ್ಲದೆ ಹಣ ತಲಪಿಸಿದ ಹಾಗೂ ಆಮಿಷ ವೊಡ್ಡಿದ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.