ಉಡುಪಿ, ಜೂ.07 (DaijiworldNews/HR): ದೊಡ್ಡಣಗುಡ್ಡೆ ಮೂಡಸಗ್ರಿ ಸಮೀಪದ ರೈಲು ರಸ್ತೆಯಲ್ಲಿ ಅಪರಿಚಿತ ಗಂಡಸಿನ ದೇಹವು ಛಿದ್ರಗೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆಯು ಸೋಮವಾರ ನಡೆದಿದೆ.
ರಾತ್ರಿ ಸಮಯ ಸಂಚರಿಸುವ ಗೂಡ್ಸ್ ರೈಲಿಗೆ ತಲೆಯೊಡ್ಡಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಇಡಲಾಗಿದ್ದು, ಮೃತನ ವಾರಸುದಾರರು ಮಣಿಪಾಲ ಪೊಲೀಸ್ ಠಾಣೆಯ ನಾಗರಿಕ ಸಹಾಯ ಕೆಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.