ಮಂಗಳೂರು,ಜೂ07(DaijiworldNews/MS):ಉದ್ಯೋಗ, ವ್ಯಾಸಂಗ, ಮತ್ತಿತರ ಉದ್ದೇಶಗಳಿಗಾಗಿ ವಿದೇಶಗಳಿಗೆ ತೆರಳುವವರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಸಹಕಾರದಲ್ಲಿ ಭಾನುವಾರ ಡೊಂಗರಕೇರಿಯ ಕೆನರಾ ಗರ್ಲ್ ಹೈಸ್ಕೂಲ್ನಲ್ಲಿ ಶಿಬಿರ ನಡೆಸಿದ್ದು ವಿದೇಶಕ್ಕೆ ತೆರಳುವ 402 ಮಂದಿ ಹಾಗೂ 43 ಮಂದಿ ಮುಂಚೂಣಿಯ ಕಾರ್ಯಕರ್ತರು ಸೇರಿದಂತೆ 445 ಮಂದಿ ಕೊವಿಶೀಲ್ಡ್ ಲಸಿಕೆ ಪಡೆದರು.
ಲಸಿಕಾ ಶಿಬಿರ ಕೇಂದ್ರಕ್ಕೆ ಸಂಸದನಳಿನ್_ ಕುಮಾರ್ ಕಟೀಲು, ಜಿಲ್ಲಾಧಿಕಾರಿ ಡಾ। ರಾಜೇಂದ್ರ . ಕೆ.ವಿ., ಪ್ರೊಬೆಷನರಿ ಡಿಸಿ ಅಕ್ರಂ, ಮಾಜಿ ಸಚಿವ. ರಮಾನಾಥ ರೈ ಭೇಟಿ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ। ಕಿಶೋರ್ ಕುಮಾರ್, ಆರ್ಸಿಎಚ್ ಅಧಿಕಾರಿ ಡಾ| ರಾಜೇಶ್, ದ.ಕ. ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಚೇರ್ಮನ್ ಶಾಂತಾರಾಮ ಶೆಟ್ಟಿ ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.