ಕಾರ್ಕಳ, ಜೂ.06 (DaijiworldNews/HR): ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಕಳ ಇವರ ಸಹಯೋಗದಲ್ಲಿ ಕಾರ್ಕಳ ಕರಿಯಕಲ್ಲು ಹಿಂದೂ ರುದ್ರಭೂಮಿಯ ಆವರಣದಲ್ಲಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸ್ಯಾನಿಟೈಸರ್ ಮಾಡಲಾಯಿತು.
ರಾಜ್ಯ ಬಜರಂಗದಳ ಸಂಚಾಲಕ ಸುನಿಲ್ ಕೆ.ಆರ್ , ಪುರಸಭಾ ಮಾಜಿ ಸದಸ್ಯ ಹಾಗೂ ರುದ್ರಭೂಮಿ ವ್ಯವಸ್ಥಾಪನ ಸಮಿತಿಯ ಸಂಚಾಲಕ ಪ್ರಕಾಶ್ ರಾವ್, ಪುರಸಭೆಯ ಉಪಾಧ್ಯಕ್ಷೆ ಪಲ್ಲವಿ ರಾವ್, ಲಯನ್ಸ್ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ಪ್ರವೀಣ್, ಬಜರಂಗದಳದ ತಾಲೂಕುಸುರಕ್ಷಾ ಪ್ರಮುಖ್ ಮನೋಜ್, ರಾಕೇಶ್ ಪೂಜಾರಿ, ರವಿ ಶೆಟ್ಟಿ, ಪ್ರತೀಕ್ ಹಾಗೂ ರುದ್ರಭೂಮಿ ಸಮಿತಿಯ ಸುರೇಶ್ ಕೋಟ್ಯಾನ್, ರಾಜರಾಮ ರಾವ್, ಸುರೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.