ಕುಂದಾಪುರ, ಜೂ.5(DaijiworldNews/HR): ತಾಲೂಕಿನ ಕುಂದಬಾರಂದಾಡಿ ಎಂಬಲ್ಲಿ ರೈಲು ಢಿಕ್ಕಿಯಾಗಿ ಚಿರತೆಯೊಂದು ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಸೇನಾಪುರ ವ್ಯಾಪ್ತಿಯ ಕುಂದಬಾರಂದಾಡಿಯಲ್ಲಿ ಘಟನೆ ನಡೆದಿದ್ದು, ರಾಜಧಾನಿ ಹೆಸರಿನ ರೈಲು ಚಿರತೆಗೆ ಢಿಕ್ಕಿಯಾಗಿ ಮೂರು ವರ್ಷದ ಚಿರತೆ ಗಂಡು ಚಿರತೆ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.