ಕಾರ್ಕಳ, ಜೂ. 04 (DaijiworldNews/SM): ಹಸಿವೆಯಿಂದ ಬಳಲಿದ ವೃದ್ಧ ತಾಯಿ ಊಟ ಕೇಳಿದ್ದರೆಂಬ ಕಾರಣಕ್ಕಾಗಿ ತೆಂಗಿನ ಮರದ ಹೆಡೆಯಿಂದ ತಲೆಗೆ ಹೊಡೆದ ಘಟನೆ ಕಲ್ಯಾ ಕುಂಟಾಡಿ ಅಶೋಕ ನಗರದ ಎಂಬಲ್ಲಿ ನಡೆದಿದೆ.
ದಾಮೋದರ ಆಚಾರ್ಯ ಪ್ರಕರಣದ ಆರೋಪಿತ ವ್ಯಕ್ತಿ. ಈತನ ತಾಯಿ ಯಶೋದಾ(83) ಘಟನೆಯಲ್ಲಿ ತೀವ್ರ ಗಾಯಗೊಂಡು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಜುಲೈ 7ರಂದು ರಾತ್ರಿ 9 ಗಂಟೆಗೆಯ ವೇಳೆಗೆ ಈ ಘಟನೆ ನಡೆದಿದೆ.
ವಯೋ ಸಹಜವೆಂಬಂತೆ ದುಡಿಯಲು ಅಶಕ್ತರಾಗಿದುದ್ದರಿಂದ ಇವರ ಮಗ ದಾಮೋದರ ಆಚಾರ್ಯ ಕೋಪಗೊಂಡು, ಬೈಯುತ್ತಿರುವುದು ಆತನ ದಿನಚರಿಯಾಗಿತ್ತು. ಹಸಿವೆಯಾಗುತ್ತಿದೆ ಎಂದು ಹೇಳಿದ ವಯೋವೃದ್ಧೆ ಯಶೋದಾ ತನಗೆ ಊಟ ನೀಡುವಂತೆ ದಾಮೋದರ ಆಚಾರ್ಯನಲ್ಲಿ ತಿಳಿಸಿದ್ದರು. ಅದರಿಂದ ಕೋಪಗೊಂಡು ನಿನಗೆ ಊಟ ಹಾಕಲು ಸಾಧ್ಯವಿಲ್ಲ ಎಂದು ಬೈದು ತೆಂಗಿನ ಮರದ ಹೆಡೆಯಿಂದ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾನೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.