ಕಾರ್ಕಳ, ಜೂ 4(DaijiworldNews/MS): ಪಾದಚಾರಿ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ಕುಸಿದು ಬಿದ್ದು ಜೀವ ತೆತ್ತ ಘಟನೆ ಮೇ.4 ರ ಶುಕ್ರವಾರ ಮಧ್ಯಾಹ್ನ ನಗರದ ಮೂರು ಮಾರ್ಗ ಬಳಿಯಲ್ಲಿ ಸಂಭವಿಸಿದೆ.
ಮೂಡಬಿದ್ರಿಯ ಪಾಲಡ್ಕದ ಬಯ್ಯ(66) ಹೆಸರುವುಳ್ಳ ಚುನಾವಣಾ ಪತ್ರವೊಂದನ್ನು ಮೃತ ಮಹಿಳೆ ಹಿಡಿದು ಕೊಂಡಿದ್ದ ಪ್ಲಾಸ್ಟಿಕ್ ಕವರ್ನಲ್ಲಿ ಲಭಿಸಿದೆ. ಅದರನ್ವಯ ಮೃತ ಮಹಿಳೆಯ ಗುರುತು ಲಭಿಸಿದೆ.
ಪುರಸಭಾ ಉಪಾಧ್ಯಕ್ಷೆ ಪಲ್ಲವಿ ರಾವ್, ಪುರಸಭೆಯ ಮಾಜಿ ಸದಸ್ಯ ಪ್ರಕಾಶ್ ರಾವ್, ಸಂತೋಷ್ ರಾವ್, ಕೆ.ಬಿ.ಕೀರ್ತನ್ ಕುಮಾರ್, ರಾಜೇಂದ್ರ, ಪ್ರಸನ್ನ ಮೊದಲಾದವರು ಮೃತ ಮಹಿಳೆಯ ಶವವನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಲು ನೆರವಾದರು.