ಕಾರ್ಕಳ, ಜೂ 3(DaijiworldNews/MS): ನಗರದ ಹವಾಲ್ದಾರ್ ಬೆಟ್ಟು ಎಂಬಲ್ಲಿ ವೃದ್ಧ ದಂಪತಿಗಳು ವಿಷ ಸೇವಿಸಿ ಅಸ್ವಸ್ಥರಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತರನ್ನು ಕೆ.ಪಿ.ಅನಂತ ಪ್ರಭು(84),ಕೆಪಿ.ಪದ್ಮಾ ಪ್ರಭು(82) ಎಂದು ಗುರುತಿಸಲಾಗಿದೆ. ಇವರು ಮೇ ೩೧ರಂದು ತಮ್ಮದೇ ಮನೆಯಲ್ಲಿ ವಿಷ ಪದಾರ್ಥ ಸೇವನೆಗೈದು ಅಸ್ವಸ್ಥರಾಗಿದ್ದರು . ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆಗೆ ಸ್ಪಂದಿಸದೇ ದಂಪತಿಗಳು ಕೊನೆಯುಸಿರೆಳೆದಿದ್ದಾರೆ. ಅನಂತಪ್ರಭು ಜೂ.1 ರ ಬೆಳಗ್ಗೆ ಮೃತರಾದರೆ ಪದ್ಮಾಪ್ರಭುರವರು ಮಧ್ಯಾಹ್ನದ ವೇಳೆಗೆ ಮೃತರಾದರು. ದಂಪತಿಗಳಿಬ್ಬರು ಒಂದು ತಾಸಿನ ಅಂತರದಲ್ಲಿ ಮೃತಪಟ್ಟಿದ್ದಾರೆ.
ಕೆನರಾ ಬ್ಯಾಂಕ್ನಲ್ಲಿ ಉದ್ಯೋಗಿ ಯಾಗಿದ್ದ ಕೆ.ಪಿ ಅನಂತ ಪ್ರಭು, ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಕಾರ್ಕಳ ನಗರದಲ್ಲಿ ಪಾತ್ರೆ ಮಳಿಗೆ ನಡೆಸುತ್ತಿದ್ದರು. ಈ ನಡುವೆ ಪತ್ನಿ ಕೆ.ಪಿ ಪದ್ಮಾ ಪ್ರಭು ಅನಾರೋಗ್ಯಕ್ಕೆ ತುತ್ತಾಗಿದ್ದರೆಂದು ತಿಳಿದುಬಂದಿದ್ದು, ಇದುವೇ ಘಟನೆಗೆ ಕಾರಣವೆನ್ನಲಾಗಿದೆ.
ದಂಪತಿಗಳು ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿರುವ ಮಗನನ್ನು ಸೇರಿ ಇಬ್ಬರು ಪುತ್ರರನ್ನು ಅಗಲಿದ್ದಾರೆ