ಕಾರ್ಕಳ, ಜೂ. 02 (DaijiworldNews/SM): ಹೆತ್ತವರಿಂದ ನಿರ್ಲಕ್ಷಕ್ಕೆ ಒಳಗಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ನಾಲ್ಕು ಎಳೆ ಪ್ರಾಯದ ಮಕ್ಕಳನ್ನು ಸಮಾಜ ಸೇವಕಿಯೊಬ್ಬರ ಸಮಯೋಚಿತ ಸಹಕಾರದಿಂದ ಉಡುಪಿ ಮಕ್ಕಳ ಪುರ್ನಸತಿ ಕೇಂದ್ರದವರು ರಕ್ಷಣೆ ಮಾಡಿದ ಘಟನೆ ಜೂ.೨ರಂದು ನಡದಿದೆ.
ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮದನಾಡು ಎಂಬಲ್ಲಿ ಕೌಟುಂಬಿಕ ಕಲಹದಿಂದ ಪದ್ಮನಾಭ ಎಂಬವರನ್ನು ಪತ್ನಿ ತೊರೆದು ಹೋಗಿದ್ದಾರೆ. ದಂಪತಿಗಳಿಗೆ ನಾಲ್ಕು ಮಂದಿ ಮಕ್ಕಳಿದ್ದು, ತಾಯಿ ಇಲ್ಲದೆ ತಂದೆಯೊಂದಿಗೆ 1 ಹೆಣ್ಣು ಸೇರಿ ನಾಲ್ಕು ಮಂದಿ ಮಕ್ಕಳು ಅಸಹಾಯಕ ಸ್ಥಿತಿಯಲಿದ್ದರು. ನಾಲ್ವರು ತಂದೆಯೊಂದಿಗೆ ಸುರಕ್ಷಿತವಲ್ಲದೆ ವಾಸವಾಗಿದ್ದರು. ಸರಿಯಾಗಿ ಅನ್ನ ಆಹಾರವಿಲ್ಲದೆ ಆರೈಕೆಯೂ ಇಲ್ಲದೆ ಮಕ್ಕಳು ನಿರ್ಗತಿಕ ಸ್ಥಿತಿಯಲ್ಲಿದ್ದರು.
ಸಮಾಜ ಸೇವಕಿ ರಮೀತಾ ಶೈಲೇಂದ್ರರವರ ಗಮನಕ್ಕೆ ಬಂದು ಅವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕರೆ ಮಾಡಿದ ಹಿನ್ನಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜೂ.೨ರಂದು ಸ್ಥಳಕ್ಕೆ ಭೇಟಿ ನೀಡಿತ್ತು. ತಾಯಿ ಇಲ್ಲದೆ ತಂದೆಯ ಆರೋಗ್ಯ ಸರಿಯಿಲ್ಲದೆ ಮಕ್ಕಳಿರುವ ಪರಿಸ್ಥಿತಿಯನ್ನು ಕಂಡು ನಾಲ್ಕು ಮಕ್ಕಳನ್ನು ಉಡುಪಿ ಪುನಾರ್ವಸತಿ ಕೇಂದ್ರಕ್ಕೆ ಕರೆದೊಯ್ದು ರಕ್ಷಣೆ ನೀಡಲಾಯಿತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕುಮಾರ್ ನಾಯ್ಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್, ರಕ್ಷಣಾಧಿಕಾರಿ ಮಹೇಶ್ ದೇವಾಡಿಗ, ಕಾರ್ಕಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್, ಕಾರ್ಕಳ ಗ್ರಾಮಾಂತರ ಠಾಣೆ ಎಸ್ಐ ತೇಜಸ್ವಿ, ಹೆಡ್ ಕಾನ್ಸ್ಟೇಬಲ್ ಸತೀಶ್ ನಾಯ್ಕ್, ನಿಟ್ಟೆ ಪಂಚಾಯತ್ ಅಧ್ಯಕ್ಷ ಸತೀಶ್ ಸದಸ್ಯರಾದ ಪ್ರವೀಣ್ ಕೋಟ್ಯಾನ್, ಆತ್ಮನಂದ್ ಪೂಜಾರಿ, ಸಮಾಜ ಸೇವಕಿ ರಮಿತಾ ಶೈಲೇಂದ್ರ, ಹರ್ಷವರ್ಧನ್ ನಿಟ್ಟೆ ಉಪಸ್ಥಿತಿರಿದ್ದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಪುಟಾಡೋ ಆದೇಶದಂತೆ ೪ ಮಕ್ಕಳಿಗೆ ಪುನಾರ್ವಸತಿ ಕಲ್ಪಿಸಲಾಗಿದೆ.