ಕಾಸರಗೋಡು, ಜೂ. 02 (DaijiworldNews/SM): ಕೆರೆಯಲ್ಲಿ ಮುಳುಗಿ ಹಾಸನ ಮೂಲದ ಕಾರ್ಮಿಕರೋರ್ವ ಮೃತಪಟ್ಟ ಘಟನೆ ಬುಧವಾರ ತೃಕ್ಕರಿಪುರದಲ್ಲಿ ನಡೆದಿದೆ. ಹಾಸನದ ರಮೇಶ್(56)ಮೃತಪಟ್ಟವರು.
ಕೂಲಿ ಕಾರ್ಮಿಕರಾಗಿದ್ದ ರಮೇಶ್ ರವರು ಕುಟುಂಬದೊಂದಿಗೆ ತೃಕ್ಕರಿಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮನೆ ಸಮೀಪದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಕೆಲಸ ಮುಗಿಸಿ ಕೆರೆಗೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ತೃ ಕ್ಕರಿಪುರದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿದರು. ಮೃತದೇಹವನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಗಾರ ದಲ್ಲಿರಿಸಲಾಗಿದೆ. ಘಟನೆ ಬಗ್ಗೆ ಹಾಸನ ದಲ್ಲಿರುವ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ.
ಚಂದೇರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.