ಮಂಗಳೂರು, ಜೂ 02 (DaijiworldNews/MS): ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ತಂಡವೊಂದು ಮಾರಕಾಸ್ತ್ರಗಳೊಂದಿಗೆ ಅಕ್ರಮವಾಗಿ ಮನೆಗೆ ನುಗ್ಗಿ ಮಹಿಳೆಯ ಕೊಲೆಗೆ ಯತ್ನಿಸಿ ದಾಂಧಲೆ ನಡೆಸಿದ ಘಟನೆ ಶಕ್ತಿ ನಗರದಲ್ಲಿ ನಡೆದಿದೆ.
ಸರಿಪಲ್ಲದ ಹೇಮಂತ್, ಕೋಡಿಕಲ್’ನ ರಂಜಿತ್, ಕುಂಜತ್ ಬೈಲಿನ ಸುಶಾಲ್, ಕಾವೂರಿನ ಯತೀರಾಜ್, ಕೊಟ್ಟಾರ ಅವಿನಾಶ್, ಉರ್ವಾ ಸ್ಟೋರ್ ಸುಂಕದ ಕಟ್ಟೆಯ ಧನುಷ್ , ಕೊಟ್ಟಾರ ಚೌಕಿಯ ಪ್ರಜ್ವಲ್, ಧಕ್ಕೆಯ ದೀಕ್ಷಿತ್ ,ಉರ್ವಾ ಸ್ಟ್ರೋರ್ ಸುಂಕದಕಟ್ಟೆಯ ದೀಪಕ್ ತಲವಾರು, ರಾಡ್, ಕೂಡಲಿ ಹಾಗೂ ಇನ್ನಿತರ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ರಾತ್ರಿ ಅಕ್ರಮವಾಗಿ ಪ್ರವೇಶಿಸಿ ತಲವಾರ್ ಬೀಸಿದ್ದಾರೆ. ಇದಲ್ಲದೆ ಟಿವಿ ಮಿಕ್ಸಿ ಸೋಪಾ ಇತ್ಯಾದಿ ಮನೆಯ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ.
ಹೇಮಂತ್ ಮಹಿಳೆಯ ಮಗಳನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದುದನ್ನು ನೋಡಿ ಆಕೆಯ ಸಹೋದರರು ಹೇಮಂತ್ ಗೆ ಹಾಗೂ ರಂಜಿತ್ ಸ್ನೇಹಿತರನ್ನು ಕರೆತಂದು ಕೊಲೆಗೆ ಯತ್ನಿಸಿ ಬೆದರಿಕೆಯೊಡ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.