ಮಂಗಳೂರು, ಜೂ. 1 (DaijiworldNews/SM): ನಗರದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಾರ್ನೆಮಿಕಟ್ಟೆಯ ಶಂಶೀರ್ ಅಲಿ(43) ಹಾಗೂ ಎಂಟನೇ ಬ್ಲಾಕ್ ಚೊಕ್ಕಬೆಟ್ಟು ನಿವಾಸಿ ಸರ್ಫ್ರಾಝ್ ಯಾನೆ ಚಪ್ಪ(27) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಖಾಸಗಿ ಆಸ್ಪತ್ರೆಯ ಕಂಪೌಂಡ್ ಒಳಗಡೆ ನುಗ್ಗಿ ವೈದ್ಯರೊಬ್ಬರನ್ನು ತಡೆದು ನಿಲ್ಲಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಹಲ್ಲೆ ನಡೆಸಿದ್ದಾರೆ. ಇದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಕೋವಿಡ್ ನಿಯಮಗಳನ್ನು ಕೂಡ ಆರೋಪಿಗಳು ಉಲ್ಲಂಘಿಸಿದ್ದರು ಎಂದು ತಿಳಿದುಬಂದಿದೆ.