ಕುಂದಾಪುರ, ಜೂ.01 (DaijiworldNews/HR): ಪುರಸಭಾ ವ್ಯಾಪ್ತಿಯಲ್ಲಿ 23 ವಾರ್ಡ್ಗಳಿದ್ದು, ಕುಂದಾಪುರ ಪುರಸಭೆಯ ಜನಸಂಖ್ಯೆ 30 ಸಾವಿರ ಮೀರಿದ್ದು, ಪುರಸಭಾ ವ್ಯಾಪ್ತಿಯ ನಾಗರಿಕರಿಗೆ ಲಸಿಕೆ ಪಡೆಯಲು ಪ್ರತ್ಯಕ ವ್ಯವಸ್ಥೆ ಅಗತ್ಯವಿದೆ ಎಂದು ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ ಆಗ್ರಹಿಸಿದ್ದಾರೆ.
ಈ ಕುರಿತು ಈಗ ಕೊರೊನಾ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವ ಚಂದ್ರಶೇಖರ ಖಾರ್ವಿ, "ಲಸಿಕೆಯನ್ನು ಪಡೆಯಲು ಜನರು ತುಂಬಾ ಉತ್ಸಾಹಕತೆಯಿಂದ ಬರುತ್ತಲಿದ್ದು, ಲಸಿಕೆ ಸಿಗದೇ ವಾಪಾಸ್ಸು ಹೋಗುತ್ತಿದ್ದಾರೆ. ಈಗಾಗಲೇ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಲಸಿಕೆಯನ್ನು ತಾವು ವಿತರಿಸಿ ಆಯಾಯ ಗ್ರಾಮ ಪಂಚಾಯತಿನ ಜನತೆ ಲಸಿಕೆಯನ್ನು ನೀಡಲಾಗುತ್ತಿದೆ. ಆದರೂ ಕೂಡಾ ಎಲ್ಲಾ ಸುತ್ತಮುತ್ತಿನ ಗ್ರಾಮ ಪಂಚಾಯತಿ ಜನತೆ ಲಸಿಕೆ ಪಡೆಯಲು ಕುಂದಾಪುರ ಲಸಿಕಾ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ" ಎಂದರು.
ಇನ್ನು ಹೆಚ್ಚಿನ ಜನಸಂಖ್ಯೆ ಆಗಮಿಸುತ್ತಿರುವ ಕಾರಣ ಜನದಟ್ಟಣಿ ಆಗುತ್ತಿದ್ದು, ಲಸಿಕಾ ಕೇಂದ್ರದ ಒತ್ತಡವನ್ನು ನಿವಾರಿಸಲು ಪುರಸಭಾ ವ್ಯಾಪ್ತಿಯ ಜನರಿಗೆ ಲಸಿಕೆ ಪಡೆಯಲು ಅವಕಾಶ ಮಾಡಿಕೊಡಬೇಕು" ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.