ಬಂಟ್ವಾಳ, ಮೇ 31 (DaijiworldNews/SM): ಇಲ್ಲಿನ ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವಾಗಿರುವ ಕಾರೀಜೇಶ್ವರ ದೇವಸ್ಥಾನದಲ್ಲಿ ಕೋತಿಗಳಿಗೆ ಆಹಾರದ ಕೊರತೆಯಾಗಿಲ್ಲ ಎಂದು ದೇವಳದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಪ್ರಸ್ತುತ ಲಾಕ್ ಡೌನ್ ನಿಂದಾಗಿ ಭಕ್ತರಿಲ್ಲದೆ ಕೋತಿಗಳಿಗೆ ಆಹಾರದ ಸಮಸ್ಯೆಯಾಗಿದೆ ಎನ್ನಲಾಗಿತ್ತು. ಇದಕ್ಕೆ ಪೂರಕವೆಂಬಂತೆ ವೀಡಿಯೋಗಳು ಕೂಡ ಲಭ್ಯವಾಗಿತ್ತು. ಆದರೆ, ದೇವಸ್ಥಾನದಲ್ಲಿ ಆಹಾರದ ಕೊರತೆ ಇಲ್ಲ. ದೇವಸ್ಥಾನದ ಮಂಗಗಳಿಗೆ ಅಂತಹ ಪರಿಸ್ಥಿತಿ ಎದುರಾಗಿಲ್ಲ. ನಿತ್ಯ ಕೋತಿಗಳಿಗೆ ನೈವೇದ್ಯ ನೀಡಲಾಗುತ್ತಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಅಲ್ಲದೆ, ಈ ಬಗ್ಗೆ ಅನೇಕ ಭಕ್ತರಿಂದ ಸಹಾಯ ಕೇಳಿ ದೂರವಾಣಿ ಕರೆ ಬರುತ್ತಿದೆ. ಸಕರಾತ್ಮಕವಾಗಿ ಸ್ಪಂದಿಸಿದ ಎಲ್ಲಾ ಭಕ್ತರಿಗೂ ಧನ್ಯವಾದಗಳು. ಅಗತ್ಯ ಬಿದ್ದರೆ ಖಂಡಿತಾ ಸಹಾಯ ಯಾಚಿಸುತ್ತೇವೆ ಎಂದು ಶ್ರೀ ಕಾರಿಂಜೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.