ಕಾರ್ಕಳ, ಮೇ.31 (DaijiworldNews/HR): ಕಾರ್ಕಳ ಬ್ರಾಂಡ್ ಬೆಳೆಗಳಲ್ಲಿ ಒಂದಾದ ಬಿಳಿ ಬೆಂಡೆ ಬೀಜ ವಿತರಣೆಯ ಬೃಹತ್ ಅಭಿಯಾನವು ಕಾರ್ಕಳ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಸುಮಾರು 20,000 ಮನೆಗಳಿಗೆ ಬಿಳಿ ಬೆಂಡೆ ಬೀಜದ ಪ್ಯಾಕೆಟ್ಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿತರಿಸುವ ಜೂನ್ 01ರಂದು ನಡೆಯಲಿದೆ ಎಂದು ಶಾಸಕ ವಿ.ಸುನೀಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ತಾಲೂಕು ಒಂದು ಉತ್ಪನ್ನ ಕಲ್ಪನೆಯಡಿ ಕಾರ್ಕಳ ಕ್ಷೇತ್ರದ ಕೃಷಿವಲಯದಲ್ಲಿ ಹೊಸತನವನ್ನು ತುಂಬಿ ಕ್ಷೇತ್ರದ ರೈತರ ಅಭಿವೃದ್ಧಿಯ ಆಶಯದೊಂದಿಗೆ ಕಾರ್ಕಳದ 2 ವಿಶೇಷ ಬೆಳೆಗಳನ್ನು ಬ್ರಾಂಡ್ ಬೆಳೆಗಳಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈಗಾಗಲೇ ವಿವಿಧ ಯೋಜನೆಗಳು ಹಮ್ಮಿಕೊಳ್ಳಲಾಗುತ್ತಿವೆ. ಈ ನಿಟ್ಟಿನಲ್ಲಿ ಸ್ಥಳೀಯ ವಿಶೇಷ ಬೆಳೆಗಳಾದ ಕಜೆ ಅಕ್ಕಿಯನ್ನು ಕಾರ್ಲ ಕಜೆ ಹೆಸರಿನಲ್ಲಿ ಹಾಗೂ ಬಿಳಿಬೆಂಡೆಯನ್ನು ಕಾರ್ಕಳ ಬಿಳಿಬೆಂಡೆ ಹೆಸರಿನಲ್ಲಿ ಬ್ರಾಂಡ್ ಬೆಳೆಗಳಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಉಪಸ್ಥಿತಿಯಲ್ಲಿ ಘೋಷಣೆ ಮಾಡಿದರು.
ಕಾರ್ಲ ಕಜೆ ಅಕ್ಕಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಎಲ್ಲರ ಮನಗೆದ್ದಿದ್ದು ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದೆ. ಮಾರುಕಟ್ಟೆ ವೃದ್ಧಿಸುವುದರೊಂದಿಗೆ ಹೆಚ್ಚಿನ ರೈತರು ಕಾರ್ಲ ಕಜೆ ಬೆಳೆಸುವ ಬಗ್ಗೆ ಪ್ರೋತ್ಸಾಹಿಸಲಾಗುತ್ತಿದೆ.
ಕಾರ್ಕಳದ ಬ್ರಾಂಡ್ ಆಗಿ ಘೋಷಿಸಲ್ಪಟ್ಟ ಕಾರ್ಕಳದ ಬಿಳಿ ಬೆಂಡೆ ಬೇಸಾಯವನ್ನು ಮನೆಮನೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮನೆಯಂಗಳದಲ್ಲಿ ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ಬೆಳೆಸಬಹುದಾದ ಕಾರ್ಕಳದ ಬಿಳಿ ಬೆಂಡೆ ಹೆಚ್ಚು ರುಚಿ ಹಾಗೂ ಉತ್ತಮ ಪೋಷಕಾಂಶ ಹೊಂದಿರುವ ಕರಾವಳಿಗಳ ಅಚ್ಚುಮೆಚ್ಚಿನ ತರಕಾರಿ. ಕಾರ್ಕಳ ಬಿಳಿ ಬೆಂಡೆ ಬೆಳೆಸಲು ಈಗ ಸಕಾಲ. ಇದಲ್ಲದೆ ಕಾರ್ಕಳದ ಬಿಳಿ ಬೆಂಡೆ ಬೇಸಾಯವನ್ನು ಮನೆಮನೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮನೆಯಂಗಳದಲ್ಲಿ ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ಬೆಳೆಸಬಹುದಾದ ಕಾರ್ಕಳದ ಬಿಳಿ ಬೆಂಡೆ ಹೆಚ್ಚು ರುಚಿ ಹಾಗೂ ಉತ್ತಮ ಪೋಷಕಾಂಶ ಹೊಂದಿರುವ ಕರಾವಳಿಗಳ ಅಚ್ಚುಮೆಚ್ಚಿನ ತರಕಾರಿ. ಕಾರ್ಕಳ ಬಿಳಿ ಬೆಂಡೆ ಬೆಳೆಸಲು ಈಗ ಸಕಾಲ. ವಿವಿಧ ಸಂಘ ಸಂಸ್ಥೆಗಳಾದ ಭಾರತೀಯ ಕಿಸಾನ್ ಸಂಘ, ರೋಟರಿ ಸಂಸ್ಥೆ, ತೋಟಗಾರಿಕೆ ಉತ್ಪಾದಕರ ಕಂಪನಿ ಹಾಗೂ ಇನ್ನಿತರೇ ಸಂಸ್ಥೆಗಳ ಮೂಲಕವು ರೈತರಿಗೆ ಹಾಗೂ ಸಾರ್ವಜನಿಕರಿಗೆ ಬೀಜಗಳ ವಿತರಣೆ ಜರುಗಲಿದೆ.
ಆರ್ಥಿಕ ಮಟ್ಟದಲ್ಲಿ ಬೆಳಸುವ ದೊಡ್ಡ ಮಟ್ಟದ ರೈತರಿಗೆ ಕನಿಷ್ಠ ಎಕ್ರೆ ಪ್ರದೇಶದಲ್ಲಿ ಬೆಳೆ ಬೆಳೆಸಲು ಹೆಚ್ಚಿನ ಬೀಜಗಳನ್ನು ವಿತರಿಸುವುದು, ಗ್ರಾಮೀಣ ಜನರು ಮನೆಯ ಸುತ್ತಮುತ್ತ ಭಾಗಗಳಲ್ಲಿ ಹಾಗೂ ಪಟ್ಟಣ ಪ್ರದೇಶದ ಜನರು ತಮ್ಮ ಮನೆಯ ಸುತ್ತ ಅಥವಾ ಮೇಲ್ಛಾವಣಿಗಳಲ್ಲಿ ಕುಂಡ / ಬ್ಯಾಗ್ ಗಳಲ್ಲಿ ಬೆಳೆಸುವ ಸಲುವಾಗಿ ಬೀಜಗಳನ್ನು ಅಗತ್ಯ ಪ್ರಮಾಣದಲ್ಲಿ ವಿತರಿಸಲಾಗುತ್ತದೆ.