ಉಡುಪಿ, ಮೇ.29 (DaijiworldNews/HR): ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮೇ.30ಕ್ಕೆ 7 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಕೊರೊನಾ ಪ್ರಂಟ್ಲೈನ್ ವಾರಿಯರ್ಸ್ಗೆ 8.5ಲಕ್ಷ ಮೌಲ್ಯದ ಸಲಕರಣೆಗಳನ್ನು ನೀಡಿದೆ.
ಶನಿವಾರ ಕುಂದಾಪುರದ ತಾಲೂಕು ಆರೋಗ್ಯ ಕಛೇರಿಗೆ ಕೊರೊನಾದಿಂದ ಮೃತಪಟ್ಟವರ ಶವ ಮುಚ್ಚುವ 25 ಹೊದಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ಉಡುಪಿ ಜಿಲ್ಲಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, "ಬಿಜೆಪಿ ಯುವ ಮೋರ್ಚಾ ಕೊರೊನಾ ಸಂಕಷ್ಟ ಸಮಯದಲ್ಲಿ ಸ್ಪಂದಿಸುತ್ತಾ ಬಂದಿದೆ. ಈಗಾಗಲೇ 328 ಯೂನಿಟ್ ರಕ್ತವನ್ನು ಜಿಲ್ಲಾ ಆಸ್ಪತ್ರೆಗೆ ನೀಡಿದೆ. ಸಹಾಯವಾಣಿ ಕೇಂದ್ರಗಳ ಮೂಲಕ ಮಾರ್ಗದರ್ಶನ ನೀಡುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿ 7 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ವಿಭಿನ್ನವಾಗಿ ಆಚರಿಸಲು ಬೂತ್ ಮಟ್ಟಕ್ಕೆ ಇಳಿದಿದೆ. ಸುಮಾರು 8.5 ಲಕ್ಷ ವೆಚ್ಚದಲ್ಲಿ ಕೊರೋನಾ ಫ್ರಂಟ್ ಲೈನ್ ವಾರಿಯರ್ಸ್ಗೆ ವಿವಿಧ ಸಲಕರಣೆಗಳನ್ನು ನೀಡುತ್ತಿದೆ. 10 ಸಾವಿರ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್, ಶವಹೊದಿಕೆ, ಹ್ಯಾಂಡ್ವಾಸ್, ಅಕ್ಸಿಮೀಟರ್ಗಳನ್ನು ನೀಡುತ್ತಿದೆ. ಕೋವಿಡ್ ಕೇರ್ ಸೆಂಟರ್ಗಳಿಗೆ ಹಣ್ಣುಹಂಪಲು, ಅಕ್ಸಿಮೀಟರ್, ಸ್ಯಾನಿಟೈಸರ್ ಇತ್ಯಾದಿ ಅವಶ್ಯಕ ವಸ್ತುಗಳ ನೀಡಿದೆ. ಕೊರೊನಾ ವಿರುದ್ದ ಮುಂದೆ ನಿಂತು ಸೇವೆ ಸಲ್ಲಿಸುತ್ತಿರುವ ಮೆಸ್ಕಾಂ ಲೈನ್ಮ್ಯಾನ್ಗಳು, ಗ್ಯಾಸ್ ಸಿಲೆಂಡರ್ ವಿತರಕರು, ಪ್ರೆಸ್ಕ್ಲಬ್ನವರಿಗೆ ಕೊರೋನಾದಿಂದ ರಕ್ಷಣೆಯ ಸಲಕರಣೆಗಳ ನೀಡಿದೆ" ಎಂದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೋದರಾಜ್ ಶಾಂತಿನಿಕೇತನ, ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಉಪಾಧ್ಯಕ್ಷ ಅಕ್ಷಿತ್ ಶೆಟ್ಟಿ, ಕಾರ್ಯದರ್ಶಿ ಅಭಿರಾಜ್ ಸುವರ್ಣ, ಕುಂದಾಪುರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು, ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಜ್ವಲ್ ಶೆಟ್ಟಿ ಹಾಗೂ ಲೋಹಿತ್, ಅವಿನಾಶ್ ಉಪಸ್ಥಿತರಿದ್ದರು.