ಕಾರ್ಕಳ, ಮೇ 28 (DaijiworldNews/SM): ಕಳೆದ ಒಂದು ವರ್ಷದಿಂದ ತವರು ಮನೆಯಲ್ಲಿದ್ದ ಮಹಿಳೆಯೊಬ್ಬರು ಶುಕ್ರವಾರ ಮಧ್ಯಾಹ್ನದ ವೇಳೆಗೆ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ಸಂಭವಿಸಿದೆ.
ದುರ್ಗ-ತೆಳ್ಳಾರು ಬಂಕೋಡಿಯ ತಾರಾ ಶೆಟ್ಟಿ ಅಚ್ಚಣ್ಣ ಶೆಟ್ಟಿ ದಂಪತಿಯ ಪುತ್ರಿ ರೇಖಾ ಶೆಟ್ಟಿ(33) ಆತ್ಮಹತ್ಯೆ ಮಾಡಿಕೊಂಡವರು. ಮಂಚಕಲ್ಲಿನ ರವಿ ಶೆಟ್ಟಿ ಎಂಬವರೊಂದಿಗೆ ಕಳೆದ ಆರು ವರ್ಷಗಳ ಹಿಂದೆ ವಿವಾಹವಾಗಿದ್ದ ರೇಖಾ ಶೆಟ್ಟಿ ಮುಂಬಯಿಯಲ್ಲಿ ನೆಲೆಸಿದರು.
ಕಳೆದ ವರ್ಷ ದೇಶ ವ್ಯಾಪ್ತಿ ಕಾಡಿದ ಕರೋನಾ ಸೋಂಕಿನಿಂದಾಗಿ ದೇಶ ವ್ಯಾಪಿಯಲ್ಲಿ ಲಾಕ್ಸೌನ್ ಅನುಷ್ಠಾನಗೊಂಡ ಸಂದರ್ಭದಲ್ಲಿ ಉದ್ಯಮದಲ್ಲಿ ನಷ್ಟಕ್ಕೊಳಗಾದ ರವಿ ಶೆಟ್ಟಿ ಮುಂಬಯಿಯಲ್ಲಿ ಆತ್ಮಹತ್ಯೆಗೈದಿದ್ದರು. ಪತಿ ರವಿ ಶೆಟ್ಟಿಯ ಸಾವಿನ ಬಳಿಕ ಮಾನಸಿಕವಾಗಿ ನೊಂದುಕೊಂಡಿದ್ದ ರೇಖಾ ಶೆಟ್ಟಿ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ.
ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.