ಕಾರ್ಕಳ, ಮೇ.28 (DaijiworldNews/HR): ಜೀವದ ಹಂಗನ್ನು ಲೆಕ್ಕಿಸದೇ ಬೇಕಾಬಿಟ್ಟಿಯಾಗಿ ಬೈಕ್ ಚಲಾಯಿಸಿದ ಕೊಂಡು ಹೋದ ಬೈಕ್ ಸವಾರನ ವಿರುದ್ಧ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.
ಸಾಂಧರ್ಭಿಕ ಚಿತ್ರ
ಪತ್ತೊಂಜಿಕಟ್ಟೆ-ಹಿರ್ಗಾನ ಸಾರ್ವಜನಿಕ ಸಂಪರ್ಕ ರಸ್ತೆಯ ಪೊಲ್ಲಾರ್ ಎಂಬಲ್ಲಿ ನಗರಠಾಣಾಧಿಕಾರಿ ಮಧು ಬಿ.ಇ ಅವರು ವಾಹನ ತಪಾಸಣೆ ನಡೆಸುತ್ತಿದ್ದು, ಅದೇ ವೇಳೆಗೆ ಪತ್ತೊಂಜಿಕಟ್ಟೆಯಿಂದ ಹಿರ್ಗಾನ ಕಡೆಗೆ ಸಹಸವಾರನೊಬ್ಬನನ್ನು ಕುಳಿರಿಸಿ ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಚಲಾಯಿಸಿ ಬರುತ್ತಿದ್ದ ಬೈಕ್ವೊಂದನ್ನು ಕೈಸನ್ನೆ ಮಾಡಿ ನಿಲ್ಲಿಸುವಂತೆ ಸೂಚನೆ ನೀಡಿದರು.
ಪೊಲೀಸರ ಸೂಚನೆಯನ್ನು ದಿಕ್ಕಿರಿಸಿ ಅದೇ ವೇಗವಾಗಿ ಹಾದು ಹೋಗಿರುವ ಬೈಕ್ ಸವಾರನ ವಿರುದ್ಧ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.