ಕಾರ್ಕಳ, ಮೇ.28 (DaijiworldNews/HR): ನೆರೆಮನೆಯವರಲ್ಲಿ ಉಂಟಾದ ವೈಮನಸ್ಸು ತಾರಕಕ್ಕೇರಿದ್ದು, ಬ್ಲೇಡ್ ಕಟ್ಟರ್ನಿಂದ ಗೀರಿ ಮಹಿಳೆಯರಿಬ್ಬರನ್ನು ಗಾಯಗೊಳಿಸಿದ ಘಟನೆ ನಗರದ ರಥಬೀದಿಯ ಬಾಲಾಜಿ ಅರ್ಕೇಡ್ನಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಪವಿತ್ರ ಶೆಣೈ ಹಾಗೂ ಅವರ ತಾಯಿ ಶುಭಮಂಗಳ ಘಟನೆಯಲ್ಲಿ ಗಾಯಗೊಂಡವರು. ಅದೇ ವಸತಿ ಗೃಹದ ನಿವಾಸಿ ಉಷಾ ರೈ ಪ್ರಕರಣದ ಆರೋಪಿತೆ.
4ನೇ ಮಹಡಿಯಲ್ಲಿ ವಾಸವಾಗಿರುವ ಪವಿತ್ರ ಶೆಣೈಯ ಮನೆ ಬಾಗಿಲಿಗೆ ಎಣ್ಣೆ ಚೆಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಉಷಾರೈ ಅವರಲ್ಲಿ ಪ್ರಶ್ನಿಸಿದ್ದರು. ಇದರಿಂದ ಕೆರಳಿದ ಉಷಾ ರೈ ತನ್ನ ಕೈಯಲ್ಲಿದ್ದ ಬ್ಲೇಡ್ ಕಟ್ಟರ್ನಿಂದ ಪವಿತ್ರ ಅವರ ಕೈಗೆ ಗೀರಿ ಗಾಯಗೊಳಿಸಿದರು. ತಡೆಯಲು ಬಂದ ಪವಿತ್ರ ಅವರ ತಾಯಿ ಶುಭಮಂಗಳ ಅವರಿಗೆ ಗೀರಿ ಗಾಯಗೊಳಿಸಿದ್ದಾರೆ.
ಉಪಾ ರೈ ಅವರ ಮನೆಗೆ ಸಂಪರ್ಕಿಸಲಾಗಿದ್ದ ಕೇಬಲ್ ವಯರ್ನ್ನು ಪವಿತ್ರ ಶೆಣೈ ಕತ್ತರಿಸಿ ಹಾಕಿರುವುದೇ ಈ ಎಲ್ಲಾ ಘಟನೆಗೆ ಮೂಲ ಕಾರಣವೆನ್ನಲಾಗಿದೆ.
ಈ ಬಗ್ಗೆ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.