ಮಂಗಳೂರು, ಮೇ. 27 (DaijiworldNews/HR): ವೆನ್ಲಾಕ್ ಆಸ್ಪತ್ರೆಯಲ್ಲಿ ಮೀಸಲಾದ ಕೊರೊನಾ ಆರೈಕೆ ಕೇಂದ್ರದಲ್ಲಿ ನೇಮಕಗೊಂಡಿರುವ ಗುತ್ತಿಗೆ ದಾದಿಯರು ಮತ್ತು ಗುಂಪು ಡಿ ಕಾರ್ಮಿಕರಿಗೆ ಪ್ರತಿ ತಿಂಗಳು ಸಂಬಳ ವಿಳಂಬವಾಗುತ್ತಿರುವುದಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೊನಾ ವಿರುದ್ಧ ಹೋರಾಡಲು ಈ ದಾದಿಯರು ಮತ್ತು ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ದೈಜಿವರ್ಲ್ಡ್ ಜೊತೆ ಮಾತನಾಡಿದ ಆಸ್ಪತ್ರೆಯ ದಾದಿಯೊಬ್ಬರು, "ಕೊರೊನಾ ಕರ್ತವ್ಯಕ್ಕೆ ನೇಮಕಗೊಂಡಿರುವ ಗುತ್ತಿಗೆ ದಾದಿಯರು ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು. ನಾವು ನಮ್ಮ ಜೀವನವನ್ನು ಅಪಾಯದಲ್ಲಿರಿಸಿಕೊಂಡು ಕೊರೊನಾ ರೋಗದ ವಿರುದ್ಧ ಹೋರಾಡುತ್ತೇವೆ ಮತ್ತು ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದೇವೆ. ದುರದೃಷ್ಟವಶಾತ್ ನಾವು ನಮ್ಮ ಸಂಬಳವನ್ನು ಸಮಯಕ್ಕೆ ಸರಿಯಾಗಿ ಪಡೆಯುತ್ತಿಲ್ಲ. ಇದು ಒಂದು ತಿಂಗಳು ವಿಳಂಬವಾಗುತ್ತಿದ್ದು, ನಮ್ಮ ಜೀವನವನ್ನು ನಡೆಸುವುದು ತುಂಬಾ ಕಷ್ಟಕರವಾಗಿದೆ" ಎಂದರು.
ಇನ್ನು ಕೊರೊನಾದ ಮೊದಲ ಅಲೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ದಾದಿಯರಿಗೆ ಸತತ ಮೂರು ದಿನಗಳ ಕಾಲ ಕೆಲಸ ಮಾಡಿದ ನಂತರ ಮೂರು ದಿನಗಳ ರಜೆ ನೀಡಲಾಗಿದೆ ಎಂದು ಮತ್ತೊಬ್ಬ ನರ್ಸ್ ಮಾಹಿತಿ ನೀಡಿದರು. ಆದರೆ ಈ ಸಮಯದಲ್ಲಿ, ಮೀಸಲಾದ ಕೊರೊನಾ ಆರೈಕೆ ಕೇಂದ್ರದಲ್ಲಿ ನಿಯೋಜಿಸಲ್ಪಟ್ಟಿರುವ ದಾದಿಯರಿಗೆ ವಾರದಲ್ಲಿ ಕೇವಲ ಒಂದು ದಿನದ ರಜೆ ನೀಡಲಾಗುತ್ತದೆ" ಎಂದಿದ್ದಾರೆ.
ದೂರವಾಣಿಯಲ್ಲಿ ಮಾತನಾಡಿದ ಜಿಲ್ಲಾ ವೈದ್ಯಾಧಿಕಾರಿ ಡಾ.ಸದಾಶಿವ್ ಶಾನ್ಭಾಗ್, "ಏಪ್ರಿಲ್ ತಿಂಗಳ ವೇತನವನ್ನು ಶೀಘ್ರದಲ್ಲೇ ನೀಡಲಾಗುವುದು, ಬಜೆಟ್ನಲ್ಲಿ ವಿಳಂಬವಾಗಿದ್ದರಿಂದ ಸಂಬಳ ಬರುವುದು ವಿಳಂಬವಾಯಿತು" ಎಂದರು.