ಕಾಸರಗೋಡು, ಮೇ. 27 (DaijiworldNews/HR): ವಿದ್ಯುತ್ ಶಾಕ್ ತಗಲಿ ನಿವೃತ್ತ ಶಿಕ್ಷಕರೋರ್ವರು ಮೃತಪಟ್ಟ ದಾರುಣ ಘಟನೆ ಗುರುವಾರ ಮಧ್ಯಾಹ್ನ ನಗರ ಹೊರವಲಯದ ಕೂಡ್ಲು ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು ಕೂಡ್ಲು ರಾಮದಾಸನಗರ ಗಂಗೆ ರಸ್ತೆಯ ಮುರಳೀಧರ (57) ಎಂದು ಗುರುತಿಸಲಾಗಿದೆ.
ಪಟ್ಲ ಸರಕಾರಿ ಶಾಲೆಯ ಹಿಂದಿ ಶಿಕ್ಷಕರಾಗಿದ್ದ ಮುರಳೀಧರ ಒಂದು ವರ್ಷದ ಹಿಂದೆಯಷ್ಟೇ ನಿವೃತ್ತರಾಗಿದ್ದರು.
ಮೋಟಾರ್ ಪಂಪ್ನಿಂದ ಶಾಕ್ ತಗಲಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದಾಗ ಮೃತಪಟ್ಟಿದ್ದರು.
ಚೆರ್ಕಳ ನಿವಾಸಿಯಾಗಿದ್ದ ಮುರಳೀಧರ ಅವರು ಕೆಲ ಸಮಯಗಳಿಂದ ಕೂಡ್ಲುವಿನಲ್ಲಿ ವಾಸವಾಗಿದ್ದರು.
ಈ ಬಗ್ಗೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.