ಮಂಗಳೂರು, ಮೇ. 27 (DaijiworldNews/HR): ಕಲ್ಲಿದ್ದಲು ತುಂಬಿದ ಟ್ರಕ್ ಪಲ್ಟಿಯಾಗಿ, ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರಾದ ಘಟನೆ ಗುರುವಾರದಂದು ಮರೋಳಿಯಲ್ಲಿ ನಡೆದಿದೆ.
ಟ್ರಕ್ ಚಾಲಕನನ್ನು ಮಂಡ್ಯ ಮೂಲದ ಕಾರ್ತಿಕ್ ಎಂದು ಗುರುತಿಸಲಾಗಿದೆ.
ಕಲ್ಲಿದ್ದಲು ಸಾಗಿಸುವ ಟ್ರಕ್ ಪಣಂಬೂರಿನಿಂದ ಮಂಡ್ಯದ ಮದ್ದೂರಿಗೆ ತೆರಳುತ್ತಿತ್ತು.
ಟ್ರಕ್ ಮರೋಳಿ ತಲುಪಿದಾಗ ಅದರ ಬ್ರೇಕ್ ಫೇಲ್ ಆಗಿ ರಸ್ತೆ ವಿಭಜಕದ ಮೇಲೆ ಹೋಗಿ ರಸ್ತೆಯ ಇನ್ನೊಂದು ಬದಿಯಲ್ಲಿ ಪಲ್ಟಿಯಾಗಿದೆ.
ಇನ್ನು ಮಾರ್ಚ್ ತಿಂಗಳಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಆಮದು ಮಾಡಿದ ಕಲ್ಲಿದ್ದಲನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಮರೋಳಿ ಬಳಿ ಉರುಳಿಬಿದ್ದಿತ್ತು.