ಬೆಳ್ತಂಗಡಿ, ಮೇ 27 (DaijiworldNews/MS): ನೆರಿಯದ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ 105 ಮಂದಿಗೆ ಕರೊನ ವೈರಸ್ ತಗುಲಿರುವ ಹಿನ್ನಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ಮೇ 26 ರ ಬುಧವಾರ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮ ವಾಸಿಗಳ ಆರೋಗ್ಯ ರಕ್ಷಣೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದ್ದಾರೆ.
ಆಶ್ರಮದ ವ್ಯವಸ್ಥಾಪಕ ನಿರ್ದೇಶದ ಯು. ಸಿ ಪೌಲೋಸ್ ಮಾತನಾಡಿ, ಆಶ್ರಮದ 270 ಮಂದಿ ಅಶ್ರಮವಾಸಿಗಳ ಪೈಕಿ 95 ಸೋಂಕು ತಗುಲಿದ್ದು, 47 ಸಿಬ್ಬಂದಿಗಳ ಪೈಕಿ 10 ಮಂದಿಗೆ ಪಾಸಿಟಿವ್ ಬಂದಿದೆ. ಇನ್ನೂ 31 ಮಂದಿಯ ಪರೀಕ್ಷೆಗಳನ್ನು ಮಾಡಬೇಕಾಗಿದೆ, ಇವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವುದು ಅಸಾಧ್ಯವೆಂದು ಅವರು ವಿವರಿಸಿದರು.
"ಇಲ್ಲಿನ 90 ಪ್ರತಿಶತದಷ್ಟು ಜನರು ಮಾನಸಿಕ ಅಸ್ವಸ್ಥರಾಗಿರುವುದರಿಂದ, ನೋಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ಆಶ್ರಮದ ಆಶ್ರಯದಲ್ಲಿ 80 ಕ್ಕೂ ಹೆಚ್ಚು ಗೂವುಗಳಿದ್ದು ಮೇವು ಕೊರತೆಯನ್ನು ಎದುರಿಸುತ್ತಿವೆ. ಆದ್ದರಿಂದ ಅವರು ಆಂಬ್ಯುಲೆನ್ಸ್, ಔಷಧಿ ಮತ್ತು ಮೇವನ್ನು ಒದಗಿಸುವಂತೆ ಶಾಸಕರಿಗೆ ವಿನಂತಿಸಿದರು .
ಅಗತ್ಯವಿರುವ ಸೌಲಭ್ಯಗಳನ್ನು ಪಂಚಾಯತ್ ಮೂಲಕ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಅಗತ್ಯವಿರುವ ಔಷಧಿಗಳ ಪಟ್ಟಿಯನ್ನು ಒದಗಿಸಿದರೆ ವೈಯಕ್ತಿಕ ನೆಲೆಯಲ್ಲಿ ಪೂರೈಸುವ ಭರವಸೆ ನೀಡಿದರು. ಇನ್ನು ಪಿಪಿಇ ಕಿಟ್ಗಳನ್ನು ಈಗಾಗಲೇ ಒದಗಿಸಲಾಗಿದೆ ಮತ್ತು ಹೆಚ್ಚುವರಿ ಸ್ಟಾಕ್ ಅಗತ್ಯವಿದ್ದರೆ ಅದನ್ನು ಪೂರೈಸಲಾಗುವುದು ಎಂದು ಅವರು ಹೇಳಿದರು. ತರಕಾರಿಗಳ ಅವಶ್ಯಕತೆಯ ಬಗ್ಗೆ, ಅವರು ಸ್ಥಳೀಯ ತರಕಾರಿ ಮಾರಾಟಗಾರರನ್ನು ಭೇಟಿ ಮಾಡುವುದಾಗಿ ಹೇಳಿದರು. ಆಶ್ರಮದಲ್ಲಿರುವ ದನಕರುಗಳಿಗೆ ಮೇವು ನೀಡುವಂತೆ ಹೈನುಗಾರರಿಗೆ ಮನವಿ ಮಾಡಬೇಕೆಂದು ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಕೋರಿದರು.