ಕಾರ್ಕಳ, ಮೇ 26 (DaijiworldNews/SM): ಬಜಗೋಳಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ಬಜಗೋಳಿ ಸಿಂಡಿಕೇಟ್ ಬ್ಯಾಂಕ್ನ ಪಿಗ್ಮಿ ಸಂಗ್ರಹಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಬುಧವಾರದಂದು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೇ ೨೪ರಂದು ಬೆಳಿಗ್ಗೆ 11:30ಕ್ಕೆ ಔಷಧಿ ಖರೀದಿಗೆಂದು ಮನೆಯಿಂದ ಬಜಗೋಳಿಯ ಜನೌಷಧಿ ಕೇಂದ್ರಕ್ಕೆ(ಮೆಡಿಕಲ್) ಅವರು ಬಂದಿದ್ದರು. ಜೌಷಧ ಪಡೆದು ಮರಳಿ ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದಾಗ ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಚಲಾಯಿಸಿಕೊಂಡು ಬಂದ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ ಟೆಂಪೋದಡಿ ಸಿಲುಕಿ ಸುಮಾರು 75 ಮೀಟರ್ ರಸ್ತೆಯಲ್ಲಿ ಎಳೆದು ಹೋಗಿರುವುದರಿಂದ ತೀವ್ರತರದಲ್ಲಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.