ಪುತ್ತೂರು, ಮೇ 26 (DaijiworldNews/MS): ಮಂಗಳೂರಿನ ಟಿಂ-ಬಿ ಹ್ಯೂಮನ್ ಮತ್ತು ಪುತ್ತೂರು ಕಮ್ಯೂನಿಟಿ ಸೆಂಟರ್ ಕೊಡುಗೆಯ 6 ಆಕ್ಸಿಜನ್ ಜಂಬೊಸಿಲಂಡರನ್ನು ಪುತ್ತೂರು ಶಾಸಕರ ಕೋವಿಡ್ ವಾರ್ ರೂಂ ಮೂಲಕ ಸರಕಾರಿ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.
ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರ್ ಅವರಿಗೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೊಕೇಶ್, ಮತ್ತು ಉಧ್ಯಮಿ ಹಾರಿಸ್ ಪರ್ಲಡ್ಕರವರು ಸಿಲಿಂಡರ್ ಹಸ್ತಾಂತರಿಸಿದರು. ಶಾಸಕರ ಕೋವಿಡ್ ವಾರ್ ರೂಂ ನ ಕ್ಷಿಪ್ರ ಮತ್ತು ಪರಿಣಾಮಕಾರಿ ಕಾರ್ಯಾಚರಣೆಯನ್ನು ಪ್ರೋತ್ಸಾಹಿಸಲು ಅಗತ್ಯ ಇದ್ದರೆ ಇನ್ನಷ್ಟೂ ಸಹಕಾರವನ್ನು ನೀಡಲು ಸಿದ್ದ ಎಂದು ಉಧ್ಯಮಿ ಹಾರಿಸ್ ಪರ್ಲಡ್ಕ ತಿಳಿಸಿದರು.
ಪ್ರತೀ ದಿನವು ಒಂದು ಜಂಬೊ ಸಿಲಿಂಡರಿನಲ್ಲಿ ಸುಮಾರು 5 ರೋಗಿಗಳು ಉಪಯೋಗಿಸ ಬಹುದಾದ, ಒಟ್ಟು ಈ 6 ಜಂಭೋ ಆಕ್ಸಿಜನ್ ಸಿಲಿಂಡರ್, ಶಾಸಕರ ವಾರ್ ರೂಂ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿರುವುದು ಉತ್ತಮ ನಿರ್ಧಾರ ಎಂದು ಶಾಸಕರಾದ ಸಂಜೀವ ಮಠಂದೂರ್ ಅಭಿಪ್ರಾಯ ಪಟ್ಟರು. ಟೀಂ- ಬಿ ಹ್ಯೂಮನ್ ಮೂಲಕ ಆಸಿಫ್ ಡೀಲ್ಸ್ ರವರ ನೇತೃತ್ವದಲ್ಲಿ ನಡೆಯುತ್ತಿರುವ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದ ಶಾಸಕರು, ಬಹಳ ಅನಿವಾರ್ಯ ಸಮಯದಲ್ಲಿ ಸಂಸ್ಥೆಯ ಈ ಸೇವೆಯನ್ನು ಅಭಿನಂದಿಸಿದರು.
ಹ್ಯೂಮನ್ ಅಂದರೆ ಮಾನವೀಯತೆ. ಟೀಂ ಅಂದರೆ ತಂಡ. ಮಾನವೀಯತೆಯೊಂದಿಗೆ ತಂಡವಾಗಿ ಕಾರ್ಯಾಚರಿಸಿದರೆ ಕೊರೊನಾವನ್ನು ಸೋಲಿಸಬಹುದು ಎಂದ ಶಾಸಕರು ಕೋವಿಡನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸರಕಾರ -ಸಂಘಸಂಸ್ಥೆ ಮತ್ತು ಜನರು ಸಮಾನ ಸಹಭಾಗಿಗಳು ಆಗಬೇಕು. ಈಗಾಗಲೇ ಟೀಂ-ಬಿ ಹ್ಯೂಮನ್ ಮತ್ತು ಕಮ್ಯೂನಿಟಿ ಸೆಂಟರ್ ನವರು, ಒಂದು ಲಕ್ಷ ಹತ್ತು ಸಾವಿರ ಮೌಲ್ಯದ ಸುಮಾರು ಆರು ಆಕ್ಸಿಜನ್ ಸಿಲಿಂಡರ್ ನ್ನು ಸರಕಾರಿ ಆಸ್ಪತ್ರೆಗೆ ನೀಡಿದ್ದಾರೆ. ಈ ರೀತಿಯಲ್ಲಿ ನಾವೆಲ್ಲರೂ ಸಂಘಟಿತರಾಗಿ ಸಹಕರಿಸಿ ನಾಡಿಗೆ ವಕ್ಕರಿಸಿದ ಈ ಮಹಾಮಾರಿಯನ್ನು ನಿವಾರಿಸಲು ಪ್ರಯತ್ನಿಸಬೇಕು. ಈಗಾಗಲೇ ವಾರ್ ರೂಂ ಮೂಲಕ ಅಗತ್ಯ ಕ್ರಮಗಳನ್ನು ಜರುಗಿಸಲಾಗುತ್ತಿದೆ. ಪ್ರತೀ ರೋಗಿಯ ಮತ್ತು ಪ್ರತೀ ಪ್ರದೇಶದ ಕಣ್ಗಾವಲು ಇರಿಸಿ ರಾತ್ರಿ ಹಗಲು ಶ್ರಮಿಸುವ ತಂಡವನ್ನು ರೂಪಿಸಿ ದುಡಿಯುತ್ತಿದ್ದೇವೆ. ನಾಗರಿಕರ ಸಹಕಾರ ಇಲ್ಲಿ ಅತೀ ಮುಖ್ಯ ಎಂದು ಶಾಸಕರಾದ ಸಂಜೀವ ಮಠಂದೂರ್ ಅವರು ವಿನಂತಿಸಿದರು.
ಶಾಸಕರ ವಾರ್ ರೂಂ ಕಾರ್ಯಾಚರಣೆಯ ಬಗ್ಗೆ ಕಮ್ಯೂನಿಟಿ ಸೆಂಟರ್ ನ ಮುಖ್ಯಸ್ಥರಾದ ಹನೀಫ್ ಇವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿಗಳಾದ ಆಶಾ ಜ್ಯೋತಿ, ನಗರಸಭಾ ಅಧ್ಯಕ್ಷ ಜೀವಂದರ್ ಜಿನ್, ನಗರ ಸಭಾ ಉಪಾಧ್ಯಕ್ಷ ವಿಧ್ಯಾ ಗೌರಿ, ಪೂಡ ಅಧ್ಯಕ್ಷರದ ಬಾಮಿ ಅಶೋಕ್ ಶೆಣೈ, ತಾಲೂಕು ಪಂಚಾಯತ್ ಸ್ಥಾಯಿಸಮೀತಿ ಅಧ್ಯಕ್ಷರಾದ ಸಾಜಾ ರಾಧಾಕೃಷ್ಣ ಆಳ್ವ. ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮೀತಿಯ ಸದಸ್ಯರಾದ ರಫೀಕ್ ದರ್ಭೆ, ಟೀಂ-ಬಿ ಹ್ಯೂಮನ್ ನ ಪುತ್ತೂರು ತಾಲೂಕು ಅಧ್ಯಕ್ಷರಾದ ಇಮ್ತಿಯಾಝ್ ಪಾರ್ಲೆ, ಕಮ್ಯೂನಿಟಿ ಸೆಂಟರ್ ನ ಮಹಮ್ಮದ್ ತೌಫೀಕ್, ಮುಝಮ್ಮಿಲ್ ಚಾಯ್ಸ್ ಭಾಗವಹಿಸಿದ್ದರು