ಕಾಸರಗೋಡು, ಮೇ 25 (DaijiworldNews/MS): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 10 ರೂ . ಮೌಲ್ಯದ ಸುಮಾರು 22 ಕಿಲೋ ಗಾಂಜಾ ವನ್ನು ವಿದ್ಯಾನಗರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದು , ಇಬ್ಬರನ್ನು ಬಂಧಿಸಿದ್ದಾರೆ.
ಅಬ್ದುಲ್ ಸಮದಾನಿ , ಮುಹಮ್ಮದ್ ಸಫ್ವಾನ್
ಬಂಧಿತರನ್ನು ಉಳಿಯತ್ತಡ್ಕ ಬಿಲಾಲ್ ನಗರದ ಅಬ್ದುಲ್ ಸಮದಾನಿ ( 27) ಮತ್ತು ಅಣಂಗೂರು ಟಿ . ವಿ ಸ್ಟೇಷನ್ ರಸ್ತೆಯ ಮುಹಮ್ಮದ್ ಸಫ್ವಾನ್ ( 31) ಎಂದು ಗುರುತಿಸಲಾಗಿದೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಯಿತು. ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಸ್ಕೂಟರ್'ನ್ನು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಲಾಕ್ ಡೌನ್ ವೇಳೆ ನಿರ್ಬಂಧಗಳಿರುವುದರಿಂದ ತರಕಾರಿ ನೆಪದಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.