ಮಂಗಳೂರು, ಮೇ.25 (DaijiworldNews/HR): ಲಾಕ್ಡೌನ್ ಸಮಯದಲ್ಲಿ ಅನೇಕ ಮಂದಿ ಅನಗತ್ಯವಾಗಿ ಸಂಚರಿಸುತ್ತಿರುವುದನ್ನು ತಡೆಯಲು ವಾಹನಗಳನ್ನು ನಗರದಾದ್ಯಂತ ಸಂಚರಿಸುವುದನ್ನು ತಡೆಯಲು ಪೊಲೀಸರು ಮುಖ್ಯ ರಸ್ತೆಗಳ ಒಂದು ಬದಿಯಲ್ಲಿ ವಾಹನಗಳ ಸಂಚಾರವನ್ನು ತಡೆದಿದ್ದಾರೆ.
ಈ ನಿರ್ಬಂಧಗಳನ್ನು ಲಾಲ್ಬಾಗ್ ಮತ್ತು ಬಲ್ಲಾಲ್ಬಾಗ್, ಪಿವಿಎಸ್, ಜ್ಯೋತಿ ಮತ್ತು ಬಂಟ್ಸ್ ಹಾಸ್ಟೆಲ್ ನಡುವೆ ಜಾರಿಗೆ ತರಲಾಗಿದ್ದು, ಅಲ್ಲಿ ಎರಡೂ ಮಾರ್ಗಗಳಲ್ಲಿ ಚಲಿಸುವ ವಾಹನಗಳು ರಸ್ತೆಗಳ ಒಂದು ಬದಿಯನ್ನು ಮಾತ್ರ ಬಳಸಬೇಕಾಗುತ್ತದೆ. ಲಾಲ್ಬಾಗ್ನಿಂದ ರಸ್ತೆಯ ಬಲ ಪಥದಲ್ಲಿ ವಾಹನಗಳು ಚಲಿಸಬೇಕಾಗುತ್ತದೆ. ಬಲ್ಮಠ ಕಡೆಯಿಂದ ಚಾಲನೆ ಮಾಡುವ ಜನರು ಕೂಡ ರಸ್ತೆಯ ಒಂದು ಬದಿಯಲ್ಲಿ ಚಲಿಸಬೇಕಾಗುತ್ತದೆ.
ಇನ್ನು ರಸ್ತೆಯ ಕೆಲವು ಸ್ಥಳಗಳಲ್ಲಿ ಬ್ಯಾರಿಕೇಡ್ಗಳನ್ನು ಇರಿಸಲಾಗಿದ್ದು, ಇದರಿಂದ ಅಪಘಾತವಾಗುವ ಸಂಭವ ಕಡಿಮಾಯಾಗಲಿದೆ.
ವಾಹನಗಳ ಅನಗತ್ಯ ಸಂಚಾರದ ಮೇಲೆ ನಿಯಂತ್ರಣ ಸಾಧಿಸಲು ಮತ್ತು ಚಾಲಕರು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವುದನ್ನು ತಡೆಯಲು ಈ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಸಂಚಾರ) ಎಂ.ಎ.ನಟರಾಜ್ ಹೇಳಿದ್ದಾರೆ.