ಮಂಗಳೂರು, ಮೇ.25 (DaijiworldNews/HR): ದೇಶದಲ್ಲಿ ಕೊರೊನಾವನ್ನು ನಿಯಂತ್ರಿಸುವುದಕ್ಕಾಗಿ ಆಕ್ಸಿಜನ್ ಮತ್ತು ಇತರ ವೈದ್ಯಕೀಯ ಸಾಧನಗಳನ್ನು ಪೂರೈಸುವ ಮೂಲಕ ಅನೇಕ ರಾಷ್ಟ್ರಗಳು ಭಾರತಕ್ಕೆ ಸಹಾಯ ಮಾಡುತ್ತಿವೆ.
ಕುವೈತ್ನ ಇಂಡಿಯನ್ ಕಮ್ಯುನಿಟಿ ಸಪೋರ್ಟ್ ಗ್ರೂಪ್(ಐಸಿಎಸ್ಜಿ)ನಿಂದ ನವ ಮಂಗಳೂರು ಬಂದರು (ಎನ್ಎಂಪಿಟಿ)ಗೆ ಮಂಗಳವಾರ 11 ಆಕ್ಸಿಜನ್ ಟ್ಯಾಂಕರ್ಗಳು, ಎರಡು ಸೆಮಿ ಟ್ರೇಲರ್ಗಳು, 1,200 ಆಮ್ಲಜನಕ ಸಿಲಿಂಡರ್ಗಳು ಭಾರತದ ನೌಕಾಪಡೆಯ ಹಡಗು ಶರ್ದೂಲ್ ಹೊತ್ತು ತಂದಿದೆ.
ಭಾರತೀಯ ರೆಡ್ಕ್ರಾಸ್ ದಕ್ಷಿಣ ಕನ್ನಡದ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ, ಗೌರವ ಕಾರ್ಯದರ್ಶಿ ಪ್ರಭಾಕರ್ ಶರ್ಮಾ ಮತ್ತು ಭಾರತೀಯ ರೆಡ್ಕ್ರಾಸ್ ಸೊಸೈಟಿ ಕರ್ನಾಟಕ ರಾಜ್ಯ ನಿರ್ವಹಣಾ ಸಮಿತಿ ಸದಸ್ಯ ಯತೀಶ್ ಬೈಕಂಪಾಡಿ ಅವರು ಎನ್ಎಂಪಿಟಿಯಲ್ಲಿ ಸರಕು ಸ್ವೀಕರಿಸಿದರು.
ಎಡಿಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್, ಡಿಸಿಪಿ ಹರಿರಾಮ್ ಶಂಕರ್, ಎಸಿಪಿ ಮಹೇಶ್ ಕುಮಾರ್, ಕೋಸ್ಟ್ ಗಾರ್ಡ್ ಕಮಾಂಡರ್ ವೆಂಕಟೇಶ್ ಉಪಸ್ಥಿತರಿದ್ದರು.