ಕುಂದಾಪುರ, ಮೇ.24 (DaijiworldNews/HR): ರಾಜ್ಯದ ವಿವಿಧ ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಜನಾಂದೋಲನ ಸಮಿತಿ ಆಶ್ರಯದಲ್ಲಿ 'ನಾವು ಬದಕುಬೇಕು' ಎಂಬ ಪ್ರತಿಭಟನಾ ಕಾರ್ಯಕ್ರಮವು ಮೇ 24ರಂದು ಕುಂದಾಪುರದಲ್ಲಿಯೂ ನಡೆಯಿತು.
'ನಾವು ಬದುಕಬೇಕು' ಪೋಸ್ಟರ್ ಹಿಡಿದು ತಮ್ಮ ತಮ್ಮ ಮನೆಯ ಬಾಗಿಲಲ್ಲಿ ನಿಂತು ಫೋಟೋ ತಗೆದು ಬ್ಲಾಕ್ ಕಾಂಗ್ರೆಸ್ ಗ್ರೂಪಿಗೆ ಕಳುಹಿಸುವ ಪ್ರತಿಭಟನೆ ನಡೆಸಲಾಯಿತು.
ಕೊರೊನಾ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಬೇಕು ಹಾಗೂ ಸರ್ವರಿಗೂ ತ್ವರಿತಗತಿಯಲ್ಲಿ ವ್ಯಾಕ್ಸಿನ್ ವ್ಯವಸ್ಥೆ ಮಾಡಬೇಕು, ಗ್ರಾಮ ಪಂಚಾಯತ್ ಮಟ್ಟದಲ್ಲೂ ಕೊರೊನಾ ಕೇರ್ ಸೆಂಟರ್ ಆರಂಬಿಸಬೇಕು, ದುಡಿವ ವ್ಯಕ್ತಿಯನ್ನು ಕಳೆದುಕೊಂಡ ಸಂಸಾರಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕು. ಎಲ್ಲಾ ಬಡವರಿಗೆ ತಿಂಗಳ ದಿನಸಿ ಹಾಗೂ ಐದು ಸಾವಿರ ರೂಪಾಯಿ ಘೋಷಿಸಬೇಕು. ಎಲ್ಲಾ ಸಾಲಗಳ ಕೋರೊನಾವಧಿಯ ಕಂತುಗಳನ್ನು ಸರ್ಕಾರ ಮನ್ನಾ ಮಾಡಬೇಕು. ಕೆಲಸವಿಲ್ಲವಾಗಿರುವ ಶಿಕ್ಷಕರು, ಉಪನ್ಯಾಸಕರು, ವಕೀಲರು, ಪತ್ರಕರ್ತರು ಮುಂತಾದವರಿಗೆ ನೆರವು ಧನ ಘೋಷಿಸಬೇಕು. ಬೀಜ, ಗೊಬ್ಬರ ಹಾಗೂ ಕೃಷಿ ಉಪಕರಣಗಳ ಬೆಲೆ ತಗ್ಗಿಸಬೇಕು ಹಾಗೂ ಸಬ್ಸಿಡಿ ಹೆಚ್ಚಿಸಬೇಕು ಎನ್ನುವುದು ಈ ವಿಶಿಷ್ಠ ಪ್ರತಿಭಟನೆಯ ಬೇಡಿಕೆಯಾಗಿತ್ತು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪುರಸಭಾ ವ್ಯಾಪ್ತಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ, ಪುರಸಭೆ ಸದಸ್ಯೆ ದೇವಕಿ ಸಣ್ಣಯ್ಯ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರೆಗಾರ್, ಐಟಿ ಸೆಲ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಸೋಶಿಯಲ್ ಮಿಡಿಯಾ ಅಧ್ಯಕ್ಷ ರೋಶನ್ ಶೆಟ್ಟಿ, ಇಂಟೆಕ್ ಅಧ್ಯಕ್ಷ ಚಂದ್ರ ಅಮೀನ್, ಸೇವಾದಳ ಅಧ್ಯಕ್ಷ ಕುಮಾರ ಖಾರ್ವಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಆಶಾ ಕರ್ವಾಲೊ, ಆನಗಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ, ಐಟಿ ಸೆಲ್ ಅಧ್ಯಕ್ಷ ಶಿವಕುಮಾರ್ ಕೆ., ಹಂಗಳೂರು ಪಂಚಾಯಿತಿ ಸದಸ್ಯ ಸ್ಟೀವನ್ ಡಿ’ಕೋಸ್ಟ, ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶೋಭಾ ಸಚ್ಚಿದಾನಂದ, ಯುವ ಮುಖಂಡರಾದ ಸುನೀಲ್ ಪೂಜಾರಿ ಕೋಡಿ, ಶಶಿರಾಜ್ ಎಮ್., ಅಶ್ವತ್ ಕುಮಾರ್, ಎಲಾಲ್ಟ್ ಡಿ’ಕೋಸ್ಟ, ಶಿಶಿರ್ ಕುಮಾರ್ ಕೆ., ಅರುಣ್ ಕುಮಾರ್, ಸುರೇಶ್ ಕೆ., ಅಲೆಕ್ಸಾಂಡರ್ ಡೇಸಾ ಮೊದಲಾದವರು ಪ್ರತಿಭಟನೆ ನಡೆಸಿದರು.