ಮಂಗಳೂರು, ಮೇ.24 (DaijiworldNews/HR): ಕೊರೊನಾ ಸೋಂಕಿನ ಭೀಕರತೆಯು ಅಗ್ನಿಶಾಮಕ ಸೇವೆಯ ಸಿಬ್ಬಂದಿಗಳಿಗೂ ಕಾಡಿದ್ದು, ಕದ್ರಿ ಅಗ್ನಿಶಾಮಕ ಸೇವಾ ಕೇಂದ್ರಕ್ಕೆ ಸೇರಿದ ಏಳು ಮಂದಿಗೆ ಸೋಂಕು ದೃಢಪಟ್ಟಿದ್ದು, ಓರ್ವ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕೊರೊನಾಗೆ ಬಲಿಯಾದವರನ್ನು ಉಳ್ಳಾಲ ಕೋಟೆಕಾರ್ ನಿವಾಸಿ ನವೀನ್ ಚಂದ್ರ (54) ಎಂದು ಗುರುತಿಸಲಾಗಿದೆ.
ನವೀನ್ ಚಂದ್ರ ಅವರು ಅಗ್ನಿಶಾಮಕ ದಳದ ಸಿಬ್ಬಂದಿಯಲ್ಲದೇ ಸಾಂಸ್ಕೃತಿಕ, ಸಾಮಾಜಿಕ ಮತ್ತು ಸಂಗೀತ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದರು ಎನ್ನಲಾಗಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳಿದ ಆರು ಸಿಬ್ಬಂದಿಗಳು ಹೋಂ ಐಸೋಲೇಷನ್ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಮೃತ ನವೀನ್ ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.