ಕೋಟ, ಮೇ 24 (DaijiworldNews/MS): ಕಳೆದ ವಾರ ಕರಾವಳಿಗೆ ಅಪ್ಪಳಿಸಿದ ತೌಕ್ತೆ ಚಂಡಮಾರುತದ ಪರಿಣಾಮದಿಂದ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಮಣೂರು ಪಡುಕರೆಯ ಫಿಶರ್ಮೇನ್ ರಸ್ತೆ ಸಮೀಪ ಬಾರಿ ಪ್ರಮಾಣದಲ್ಲಿ ಕಡಲ್ಕೊರೆತ ಸಂಭವಿಸಿದ್ದು ಸಮುದ್ರದಿಂದ ಮೇಲಕ್ಕೆ ಬಂದ ಭಾರಿ ಪ್ರಮಾಣದ ತ್ಯಾಜ್ಯರಾಶಿಯನ್ನು ಒರ್ವ ದಂಪತಿಗಳು ಸ್ವಚ್ಛಗೊಳಿಸಿ ಮಾದರಿ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.
ಮಣೂರು ಪಡುಕರೆಯ ಕೃಷ್ಣ ಮೆಂಡನ್ ಶೈಲಜಾ ದಂಪತಿಗಳು ಈ ಕಾರ್ಯದಲ್ಲಿ ತೋಡಗಿಕೊಂಡಿದ್ದು ಸಮಾರು 3 ಎಕರೆ ಅಧಿಕ ಕೃಷಿಭೂಮಿಯಲ್ಲಿ ಭಾರಿ ಪ್ರಮಾಣದ ತ್ಯಾಜ್ಯಗಳು ಸೇರಿಕೊಂಡಿರುವುದನ್ನು ಮನಗಂಡ ದಂಪತಿಗಳು ಭಾನುವಾರದ ಪೂರ್ವಾಹ್ನದಿಂದಲೇ ಅದನ್ನು ತೆರೆವುಗೊಳಿಸುವ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಸಾಮಾನ್ಯವಾಗಿ ಕೋವಿಡ್ ಸಂದರ್ಭದಲ್ಲಿ ತ್ಯಾಜ್ಯ ತೆರೆವುಗೊಳಿಸುವ ಕಾರ್ಯಕ್ಕೆ ಸಂಘಸಂಸ್ಥೆಗಳು ನಿರಾಸಕ್ತಿ ಹೊಂದಿರುವ ಕಾಲಘಟದಲ್ಲಿ ದಂಪತಿಗಳ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
3 ಎಕ್ರೆ ಕೃಷಿ ಭೂಮಿ ಉಪ್ಪು ನೀರಿನಿಂದ ಹಾನಿ:
ಇಲ್ಲಿನ ಸುಮಾರು 3ಎಕ್ಕರೆ ಕೃಷಿ ಭೂಮಿ ಕಡಲ ಅಬ್ಬರಕ್ಕೆ ನಲುಗಿ ಕೃಷಿಯಿಂದ ಹಿಮ್ಮುಖಗೊಳಿಸಿದೆ.ಉಪ್ಪು ನೀರು ಆವರಿಸಿಕೊಂಡ ಹಿನ್ನಲ್ಲೆಯಲ್ಲಿ ಈ ಭೂಮಿಯಲ್ಲಿ ಕೃಷಿ ಕಾರ್ಯ ನಡೆಸಲು ಸಾಧ್ಯವಿಲ್ಲ ಎನ್ನುತ್ತಾರೆ ಸ್ಥಳೀಯರು.
ಕಳೆದ ವಾರ ವ್ಯಾಪಿಸಿದ ಚಂಡಮಾರುತ ಪರಿಣಾಮದಿಂದ ಭಾರಿ ಪ್ರಮಾಣದ ತ್ಯಾಜ್ಯ ನಮ್ಮ ಈ ಪರಿಸರವನ್ನು ಸೇರಿದೆ. ಇದನ್ನು ತೆರೆವುಗೊಳಿಸಲು ಯಾರು ಮನಸ್ಸು ಮಾಡದ ಹಿನ್ನಲೆಯಲ್ಲಿ ನಾವೇ ದಂಪತಿಗಳು ಸ್ವಚ್ಛಗೊಳಿಸುತ್ತಿದ್ದೇವೆ. - ಕೃಷ್ಣಮೆಂಡನ್ ಸ್ಥಳೀಯರು ಮಣೂರು ಪಡುಕರೆ