ಮಂಗಳೂರು, ಮೇ 24 (DaijiworldNews/MS): ಹಿರಿಯ ಸಾಹಿತಿ, ಬ್ಯಾರಿ ಭಾಷಾ ಸಂಶೋಧಕ ಪ್ರೊ. ಬಿ.ಎಂ. ಇಚ್ಲಗೊಂಡ್ (84) ವಿಧಿವಶರಾಗಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮೇ 23 ರ ಭಾನುವಾರ ರಾತ್ರಿ 9.30 ಕ್ಕೆ ಮೃತಪಟ್ಟಿದ್ದಾರೆ.
ನಗರದ ಅತ್ತಾವರ ನಂದಿಗುಡ್ಡಯ ನಿವಾಸಿಯಾಗಿದ್ದ ಬಿ.ಎಂ. ಇಚ್ಲಂಗೋಡು ಅವರು ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅವರ ಹುಟ್ಟೂರಾದ ಇಚ್ಲಂಗೋಡ್ ಗೆನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಕುರಿತಾಗಿ ನಡೆಸಿದ ಅಧ್ಯಯನಕ್ಕೆ ಮನ್ನಣೆ ಎಂಬಂತೆ ಉಡುಪಿಯಲ್ಲಿ 2011 ರಲ್ಲಿ ನಡೆದ ಮೂರನೇ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಲಭಿಸಿತ್ತು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಪ್ರಥಮ ಅವಧಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಬ್ಯಾರಿ ಕ್ಷೇತ್ರ ಕಾರ್ಯದಲ್ಲಿ ಆಳವಾಗಿ ಅಧ್ಯಯನ ನಡೆಸಿದ್ದ ಇಚ್ಲಂಗೋಡು ಅವರು ತಮ್ಮ ಇಳಿವಯಸ್ಸಿನಲ್ಲೂ ಅಧ್ಯಯನದಲ್ಲಿ ತೊಡಗಿಸಿ ಅನೇ ಯುವ ಸಂಶೋಧಕರಿಗೆ ಮಾರ್ಗದರ್ಶನವನ್ನು ನೀಡಿದ್ದರು. 1975 ರಲ್ಲಿ ದಿವ್ಯದರ್ಶನ (ಪವಿತ್ರ ಕುರಾನ್) ಕವ್ಯಾನುವಾದಕ್ಕೆ ರಾಷ್ಟ್ರಪಶಸ್ತಿ, ಮೂಡುಬಿದಿರೆಯ ರೋಟರಿ ಕ್ಲಬ್ ನಿಂದ ಸಾಹಿತ್ಯ ಸೇವಾ ಸನ್ಮಾನ, ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನದದಲ್ಲಿ ಬ್ಯಾರಿ ಸಾಹಿತ್ಯ ಸನ್ಮಾನ, ಉಡುಪಿಯಲ್ಲಿ ನಡೆದ 3 ನೇ ಬ್ಯಾರಿ ಸಾಹಿತ್ಯ ಸಮ್ಮೆಳನದ ಅಧ್ಯಕ್ಷತೆ ವಹಿಸಿದ್ದರು.