ಮಂಗಳೂರು, ಮೇ.23 (DaijiworldNews/HR): ದೇರೆಬೈಲು ವಾರ್ಡ್ನ 26ರ ಬಡ ಕುಟುಂಬಗಳಿಗೆ ಯುವ ಕಾಂಗ್ರೆಸ್ ನಾಯಕ ರಕ್ಷಿತ್ ಸಾಲಿಯನ್ ನೇತೃತ್ವದಲ್ಲಿ 100 ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಭಾನುವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಜೆ.ಆರ್.ಲೋಬೊ, "ಲಾಕ್ ಡೌನ್ ಸಮಯದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಿದಕ್ಕಾಗಿ ನಾನು ರಕ್ಷಿತ್ ಸಲಿಯನ್ ಅವರನ್ನು ಅಭಿನಂದಿಸುತ್ತೇನೆ. ಇಂದು ಸುಮಾರು 100 ಕುಟುಂಬಗಳಿಗೆ ವಾರ್ಡ್ ಸಂಖ್ಯೆ 26 ರಲ್ಲಿ ಕಿಟ್ ನೀಡಲಾಯಿತು. ಆಹಾರ ವಿತರಣೆ ಮಾಡಲು ರಕ್ಷಿತ್ ಸಾಲಿಯನ್ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಎಂದರು.
ರಕ್ಷಿತ್ ಸಾಲಿಯನ್ ಮಾತನಾಡಿ, "ನಾವು ದೇರೆಬೈಲು ವಾರ್ಡ್ನಲ್ಲಿ 100 ಕುಟುಂಬಗಳಿಗೆ ಕಿಟ್ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಕೊರೊನಾದ ಮೊದಲ ಅಲೆಯ ಸಂಧರ್ಭದಲ್ಲಿ ಕೂಡ ನಾವು ಮಂಗಳೂರಿನ ಕೆಲವು ಕುಟುಂಬಗಳಿಗೆ ಕಿಟ್ಗಳನ್ನು ನೀಡಿದ್ದೆವು. ಕಳೆದ 24 ದಿನಗಳಿಂದ ನಾವು ಕಷ್ಟದಲ್ಲಿರುವವರಿಗೆ ಆಹಾರವನ್ನು ವಿತರಿಸುತ್ತಿದ್ದೇವೆ ಮತ್ತು ಆಹಾರ ಕಿಟ್ಗಳ ಜೊತೆಗೆ ಮಾಸ್ಕ್, ಸೊಳ್ಳೆ ಪರದೆಗಳನ್ನು ಸಹ ನೀಡುತ್ತಿದ್ದೇವೆ. ಲಾಕ್ಡೌನ್ ಮುಗಿಯುವವರೆಗೆ ನಾವು ವಿತರಣೆಯನ್ನು ಮುಂದುವರಿಸುತ್ತೇವ" ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವು ಲಾಕ್ಡೌನ್ ಘೋಷಿಸಿದ ನಂತರ, ರಕ್ಷಿತ್ ಸಾಲಿಯನ್ ತನ್ನ ಸ್ನೇಹಿತರೊಂದಿಗೆ ನಗರದಲ್ಲಿ ವಾಸಿಸುವ ಬಡ, ದೈನಂದಿನ ಕೂಲಿ ಕಾರ್ಮಿಕರು, ನಿರ್ಗತಿಕರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಆಹಾರವನ್ನು ಒದಗಿಸಲು ಪ್ರಾರಂಭಿಸಿದರು. ಈ ಗುಂಪು ಉರ್ವಾ, ಮಣ್ಣಗುಡ್ಡೆ, ಪಿವಿಎಸ್, ಸ್ಟೇಟ್ ಬ್ಯಾಂಕ್ ಹಾಗೂ ಮುಂತಾದ ಸ್ಥಳಗಳಲ್ಲಿ 250-300 ಜನರಿಗೆ ಆಹಾರವನ್ನು ನೀಡುತ್ತಿದೆ.
ರಕ್ಷಿತ್ ಸಾಲಿಯನ್ ಅವರ ತಾಯಿ ಕೆ ಸಂಧ್ಯಾ ಈಶ್ವರ್ ಸಾಲಿಯನ್, ಮಾವ ರಾಜೇಶ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಟಿ.ಕೆ.ಸುಧೀರ್, ಯುವ ಕಾಂಗ್ರೆಸ್ ಮುಖಂಡ ರಮಾನಂದ ಪೂಜಾರಿ, ಮಾಜಿ ಕಾರ್ಪೊರೇಟರ್ ಪದ್ಮನಾಭ ಅಮೀನ್, ಟಿಸಿ ಗಣೇಶ್, ಬಿಪಿ ಹರೀಶ್ ಕುಮಾರ್, ಕಾರ್ಪೊರೇಟರ್ ದಿಲೀಪ್ ಕುಮಾರ್, ಅನಿಲ್ ಕುಮಾರ್ ಪೂಜಾರಿ, ನಿಧಿ ಬಿಲ್ಡರ್ಸ್ನ ಪ್ರಶಾಂತ್ ಸಾನಿಲ್, ಮಂಜುಳ ನಾಯಕ್, ರಮಣಿ, ಕಾಂಗ್ರೆಸ್ ಮುಖಂಡ ನೀರಜ್ ಪಾಲ್ ಮತ್ತು ಇತರರು ಉಪಸ್ಥಿತರಿದ್ದರು.