ಪಡುಬಿದ್ರಿ, ಮೇ.23 (DaijiworldNews/HR): ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಅರಬ್ಬೀ ಸಮುದ್ರದಲ್ಲಿ ಮುಳುಗಿ ಪಡುಬಿದ್ರಿಯ ಕಾಡಿಪಟ್ಣ ಸಮುದ್ರ ತೀರದಲ್ಲಿ ಪತ್ತೆಯಾದ ಅಲಯನ್ಸ್ ಟಗ್ಗನ್ನು ಮೇಲೇತ್ತಲು ಮಂಗಳೂರು ಬೇಂಗರೆಯ ಬದ್ರಿಯಾ ಹಾಗು ಮಂಗಳೂರಿನ ಯೋಜಕ ಕಂಪನಿ ಜಂಟಿಯಾಗಿ ಕಾರ್ಯಾನಿರ್ವಹಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.
ಪಡುಬಿದ್ರಿ ಕಾಡಿಪಟ್ಣದ ವಿಷ್ಣು ಭಜನಾ ಮಂಡಳಿಯಲ್ಲಿ ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಜಿ.ಪಂ ಶಶಿಕಾಂತ್ ಪಡುಬಿದ್ರಿ, ಎಂಆರ್ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ, ಬದ್ರಿಯಾ ಹಾಗು ಯೋಜಕ ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಸ್ಥಳೀಯರಿದ್ದ ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಭಾವಹಿಸಿ ಮಾತನಾಡಿ, "ಟಗ್ಗನ್ನು ಆದಷ್ಟು ಶೀಘ್ರದಲ್ಲಿ ಇಲ್ಲಿಂದ ತೆರವುಗೊಳಿಸಬೇಕು" ಎಂದಿದ್ದಾರೆ.
ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಎರಡೂ ಕಂಪನಿಗಳು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊಂದಾಣಿಕೆಯೊಂದಿಗೆ ಟಗ್ಗ್ ತೆರವು ಕಾರ್ಯಾಚರಣೆ ನಡೆಸಬೇಕೆಂದು ಸೂಚಿಸಿದ್ದಾರೆ.
ಮಾಜಿ ಜಿ.ಪಂ ಶಶಿಕಾಂತ್ ಪಡುಬಿದ್ರಿ ಮಾತನಾಡಿ, ಸ್ಥಳೀಯರಿಗಿರುವ ಸಾಂಕ್ರಾಮಿಕ ರೋಗ ಭಯ ಮತ್ತು ಪರಿಸರ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಅತೀ ಶೀಘ್ರ ಟಗ್ಗ್ ತೆರವು ಕಾರ್ಯಾಚರಣೆ ಆಗಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಂಆರ್ಪಿಎಲ್, ಜಿಜಿಎಂಯುವಿ ಐತಾಳ್, ಇ.ಡಿ ಎಲನ್ ಗೋವೆನ್, ನಿರ್ದೇಶಕ ಸಂಜಯ್ ವರ್ಮ, ಅಧಿಕಾರಿಗಳಾದ ಕಿರಣ್, ಮನೋಹರ್ ಮಂಗಳೂರು ಯೋಜಕ ಕಂಪನಿಯ ವಿನಯಕುಮಾರ್ ಹಾಗು ಚಂದ್ರಶೇಖರ, ಬದ್ರಿಯಾ ಕಂಪನಿಯ ಬಿಲಾಲ್ ಮೌದಿನ್, ತಾ.ಪಂ ಮಾಜಿ ಅಧ್ಯಕ್ಷೆ ನೀತಾ ಗುರುರಾಜ್, ಪಡುಬಿದ್ರಿ ಗ್ರಾ.ಪಂ ಅಧ್ಯಕ್ಷ ರವಿಶೆಟ್ಟಿ, ಉಪಾಧ್ಯಕ್ಷೆ ಯಶೋಧ, ಸದಸ್ಯೆ ವಿಧ್ಯಾಶ್ರೀ, ಮಾಜಿ ಸದಸ್ಯ ಅಶೋಕ್ ಸಾಲ್ಯಾನ್, ಕಾಡಿಪಟ್ಣ ಮೊಗವೀರ ಮಹಾ ಸಭಾದ ಕಾರ್ಯದರ್ಶಿ ಸುಂದರ ಕರ್ಕೇರ, ಪಡುಬಿದ್ರಿ ಠಾಣಾ ಪ್ರಭಾರ ಪಿಎಸ್ಐ ಜಯ.ಕೆ ಮುಂತಾದವರು ಉಪಸ್ಥಿತರಿದ್ದರು.