ಕಾಸರಗೋಡು, ಮೇ 22 (DaijiworldNews/SM): ತಾಲೂಕಿನ ಸಶಸ್ತ್ರ ಮೀಸಲು ಪಡೆಯ ಸಬ್ ಇನ್ಸ್ಪೆಕ್ಟರ್ ಕೊರೊನಾಗೆ ಬಲಿಯಾಗಿದ್ದಾರೆ. ವಿದ್ಯಾನಗರದ ಸಶಸ್ತ್ರ ಮೀಸಲು ಪಡೆಯ ವಸಂತ ಕುಮಾರ್(52) ಮೃತಪಟ್ಟವರಾಗಿದ್ದಾರೆ.
ವಸಂತ ಕುಮಾರ್ ಕಾಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಸಂತ ಕುಮಾರ್ ರಿಗೆ ಮೇ 14ರಂದು ಕೊರೋನಾ ಸೋಂಕು ದೃಢಪಟ್ಟಿತ್ತು. ಸಬ್ ಇನ್ಸ್ ಪೆಕ್ಟರ್ ಮನೆಯಲ್ಲೇ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದಾಗ ನ್ಯುಮೋನಿಯಾ ಕಂಡು ಬಂದಿತ್ತು.
ಕಾಸರಗೋಡು ನೆಲ್ಲಿಕುಂಜೆ ನಿವಾಸಿಯಾಗಿದ್ದ ವಸಂತಕುಮಾರ್ 1995ರಲ್ಲಿ ಸಶಸ್ತ್ರ ಮೀಸಲು ಪಡೆಯಲ್ಲಿ ಸೇವೆ ಆರಂಭಿಸಿದ್ದರು.