ಮಂಗಳೂರು, ಮೇ.22 (DaijiworldNews/HR): ಕೊರೊನಾ ಯಾರನ್ನು ಬಿಡಲಾರದು, ರೋಗ ನಿರೋಧಕ ಶಕ್ತಿ ನಿಮ್ಮಲಿದೆಯೆಂದು ಉಢಾಪೆಯ ಓಡಾಟ ಬೇಡ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಎಚ್ಚರಿಸಿದ್ದಾರೆ.
ನಗರದಲ್ಲಿ ಮೆ.22 ರ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿ ಕದ್ರಿ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಡೊಂಬಯ್ಯ ದೇವಾಡಿಗ ಅವರ ಹತ್ತಿರದ ಸಂಬಂಧಿ ಯುವಕನ ಉದಾಹರಣೆ ನೀಡಿದ ಆಯುಕ್ತರು, "ಪೊಲೀಸ್ ಇಲಾಖೆ ವಾಹನ ಜಪ್ತಿ ಮಾಡುತ್ತದೆ ಅಥವಾ ದಂಡ ಹಾಕುವ ಭಯದಿಂದ ಯುವಕರು ರಸ್ತೆಗಿಳಿಯಲು ಭಯಪಡಬಹುದು ಆದರೆ ಇದೆಲ್ಲವೂ ಎಷ್ಟು ದಿನವೆಂದು ಮಾಡಲು ಸಾಧ್ಯ, ಪೊಲೀಸರ ಭಯ ಬಿಟ್ಟು ಯುವಕರೇ ಜಾಗೃತಿ ಮೂಡಿಸಿಕೊಳ್ಳಲಿ" ಎಂದು ಆಯುಕ್ತರು ಹೇಳಿದರು.
"ಯುವಜನತೆಯು ನಮಗೆ ಕೊರೊನಾ ಬರುವುದಿಲ್ಲ ಎಂದು ಉಢಾಪೆ ಮಾಡಿಕೊಂಡು ಅನಗತ್ಯವಾಗಿ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದ ಯುವಕರಿಗೆ ಮಾತ್ರವಲ್ಲದೆ ನಿಮ್ಮ ಮನೆಯಲ್ಲಿರುವವರಿಗೂ ಕೊರೊನಾ ಹರಡಬಹುದು. ಸರ್ಕಾರವು ಯಾವುದೇ ನಿರ್ಧಾರವನ್ನು ಕೈಗೊಂಡರು ಅನೇಕ ತಜ್ಞರೊಂದಿಗೆ ಚರ್ಚಿಸಿ ತಿರ್ಮಾನ ಕೈಗೊಳ್ಳುತ್ತಾರೆ ಹಾಗಾಗಿ ಸರ್ಕಾರದ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ" ಎಂದು ಮನವಿ ಮಾಡಿಕೊಂಡಿದ್ದಾರೆ
ಇದೇ ವೇಳೆ "ನಾನು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ನನ್ನ ಅಣ್ಣನ ಮಗನನ್ನು ಕೊರೊನಾದಿಂದ ಕಳೆದುಕೊಂಡಿದ್ದೇನೆ. ಅವನು ಕೂಡ ಕೊರೊನಾ ಪಾಸಿಟಿವ್ ಬಂದಿದ್ದರೂ ನಿರ್ಲಕ್ಷ್ಯದಿಂದ ಅವನಿಗೆ ಮದುವೆಯಾಗಿ ಎರಡು ತಿಂಗಳಾಗಿತ್ತು ಅಷ್ಟೆ. ಹಾಗಾಗಿ ಯುವಜನತೆ ಯಾರು ಕೂಡ ನಮಗೆ ಕೊರೊನಾ ಬರುವುದಿಲ್ಲ ಎಂದು ಉಢಾಪೆಯಾಗಿ ಓಡಾಟ ಮಾಡಬೇಡಿ, ಅನಗತ್ಯವಾಗಿ ಸಂಚರಿಸಬೇಡಿ. ಕೊರೊನಾ ಯುವಕರನ್ನು ಕೂಡ ಬಲಿ ತೆಗೆದುಕೊಳ್ಳುತ್ತದೆ" ಎಂದು ಡೊಂಬಯ್ಯ ದೇವಾಡಿಗ ವಿನಂತಿಸಿಕೊಂಡಿದ್ದಾರೆ.