ಕುಂದಾಪುರ, ಮೇ 22 (DaijiworldNews/MS): ಕೊರೊನಾ ಪಾಸಿಟಿವ್ ಆಗಿ ಹೋಂ ಐಷೋಲೇಶನ್ ನಲ್ಲಿದ್ದ ಕಾವ್ರಾಡಿ ಗ್ರಾಮದ ವ್ಯಕ್ತಿಯೊಬ್ಬರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗೆ ತಿರುಗಾಟ ನಡೆಸಿರುವುದಕ್ಕೆ ಅವರ ವಿರುದ್ದ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.
ಕಾವ್ರಾಡಿ ಗ್ರಾ. ಪಂ. ಪಿಡಿಓ ಅವರು ನೀಡಿದ ದೂರಿನಂತೆ ಕಾವ್ರಾಡಿಯ ನಿವಾಸಿ ಮಹಮ್ಮದ್ ಜಾಫರ್ ವಿರುದ್ದ ಕೇಸು ದಾಖಲಾಗಿದೆ. ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು ಅವರು ಭೇಟಿ ನೀಡಿ ಪರಿಶೀಲಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ| ನಾಗಭೂಷಣ ಉಡುಪ, ಕಂಡ್ಲೂರು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಲತಾ ನಾಯಕ್ ಆಶಾ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ ಮತ್ತಿತ್ತರರು ಉಪಸ್ಥಿತರಿದ್ದರು.