ಮಂಗಳೂರು, ಮೇ 21 (DaijiworldNews/SM): ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಎದುರಿಸುತ್ತಿರುವ ಸವಾಲುಗಳಿಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಅವರ ಸಂಬಂಧಿಕರು ಮತ್ತು ಸ್ನೇಹಿತರ ಸಮಸ್ಯೆಯ ಬಗ್ಗೆ ಮಂಗಳೂರು ನಗರ ಪೊಲೀಸರು ಮೇ 21ರಂದು ಎನ್ಆರ್ಐ(ಅನಿವಾಸಿ ಭಾರತೀಯ) ಮತ್ತು ಮಂಗಳೂರು ಮೂಲದ ಭಾರತೀಯ ವಲಸಿಗರಿಗೆ ಸಹಾಯವಾಣಿ ಸಂಖ್ಯೆ 9480802300 ಬಿಡುಗಡೆ ಮಾಡಿದ್ದಾರೆ. ಈ ಸಹಾಯವಾಣಿ ಸಂಖ್ಯೆ ದಿನದ ಇಪ್ಪತ್ತನಾಲ್ಕು ಗಂಟೆ ಸೇವೆಯನ್ನು ಒದಗಿಸುತ್ತದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಎನ್ಆರ್ಐಗಳು ಕರೆಗಳು, ಧ್ವನಿ ಸಂದೇಶಗಳು, ಎಸ್ಎಂಎಸ್, ವಾಟ್ಸಾಪ್ ಆಡಿಯೋ ಮತ್ತು ವಿಡಿಯೋ ಸಂದೇಶಗಳ ಮೂಲಕ ಈ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಮತ್ತು ಅವರ ಕುಂದುಕೊರತೆಯನ್ನು ವ್ಯಕ್ತಪಡಿಸಬಹುದಾಗಿದೆ. ಈಗಾಗಲೇ, ಕೋವಿಡ್ ಸಮನ್ವಯ ವೇದಿಕೆಯಾದ ವಾಟ್ಸಾಪ್ ಗ್ರೂಪ್ ಸಮನ್ವಯದಲ್ಲಿ ವಿವಿಧ ರೀತಿಯ ಕುಂದುಕೊರತೆಗಳ ಕುರಿತು ಹಲವಾರು ಕರೆಗಳನ್ನು ಸ್ವೀಕರಿಸಲಾಗಿದೆ. ಸಹಾಯಕ್ಕೆ ಸಂಬಂಧಿಸಿದ ಕರೆಗಳನ್ನು ಸಮನ್ವಯ ಕೋವಿಡ್ ಸಮನ್ವಯ ಗುಂಪಿನ ಸ್ವಯಂಸೇವಾ ಸಂಸ್ಥೆಗಳ ಸಹಾಯದಿಂದ ತಿಳಿಸಲಾಗುವುದು. ಗಂಭೀರ ಅಥವಾ ಸೂಕ್ಷ್ಮ ಕರೆಗಳನ್ನು ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ವಿವಿಧ ಇಲಾಖೆಯ ನೋಡಲ್ ಅಧಿಕಾರಿಗಳ ಗಮನಕ್ಕೆ ಮತ್ತು ಕೋವಿಡ್ -19 ಕಾರ್ಯಪಡೆಗೆ ಒಮ್ಮೆ ತಿಳಿಸಿದ ನಂತರ ಅವುಗಳನ್ನು ಪರಿಹರಿಸಲಾಗುವುದು ಎಂದು ತಿಳಿಸಿದ್ದಾರೆ.
ಸ್ಥಳೀಯ ಸಮಸ್ಯೆಗಳಿಗೆ, ಜನರು 9480802321 ಅನ್ನು ಸಂಪರ್ಕಿಸಬಹುದಾಗಿದೆ. ಸ್ಥಳೀಯ ಸಮಸ್ಯೆಗಳನ್ನು ಸಮನ್ವಯ ಕೋವಿಡ್ ಸಮನ್ವಯ ಗುಂಪಿನ ಸಹಾಯದಿಂದ ಪರಿಹರಿಸಲಾಗುವುದು. ಕೋವಿಡ್-19 ಲಾಕ್ಡೌನ್ ಉಲ್ಲಂಘನೆ, ಔಷಧಿಗಳು ಮತ್ತು ಮೋಸ, ಬ್ಲ್ಯಾಕ್ಮೇಲ್ ಪ್ರಕರಣಗಳ ದೂರುಗಳ ಮೇಲೆ ಜನರು ಸಹಾಯವಾಣಿ ಸಂಖ್ಯೆ 112ಯನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.