ಕಾಸರಗೋಡು, ಮೇ 21(DaijiworldNews/MS): ನಗರದ ಹಳೆ ಸಾಮಾಗ್ರಿ ದಾಸ್ತಾನು ಗೋದಾಮು ವೊಂದಕ್ಕೆ ನುಗ್ಗಿದ ಕಳ್ಳರು ಸುಮಾರು ಮೂರು ಲಕ್ಷ ರೂ. ಗಳ ಸಾಮಾಗ್ರಿಗಳನ್ನು ಕಳವುಗೈದಿದ್ದು , ಈ ಬಗ್ಗೆ ಕಾಸರಗೋಡು ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೊಸ ಬಸ್ಸು ನಿಲ್ದಾಣ ಪರಿಸರದ ಸಿದ್ದಿಕ್ ಎಂಬವರ ಮಾಲಕತ್ವದ ಗೋದಾಮಿನಲ್ಲಿ ಈ ಕಳ್ಳತನ ನಡೆದಿದೆ . ಮುಂಭಾಗದ ಶಟರ್ ಮುರಿದು ಒಳನುಗ್ಗಿ ಈ ಕೃತ್ಯ ನಡೆಸಲಾಗಿದೆ . ಲಾಕ್ ಡೌನ್ ಹಿನ್ನಲೆಯಲ್ಲಿ ಗೋದಾಮು ಮುಚ್ಚಿದ್ದು , ಈ ನಡುವೆ ಪರಿಶೀಲನೆಗೆ ಬಂದಾಗ ಶಟರ್ ಮುರಿದಿರುವುದು ಕಂಡುಬಂದಿದೆ . ಅಲ್ಯೂಮಿನಿಯಂ , ತಾಮ್ರ ಮೊದಲಾದ ಸಾಮಗ್ರಿಗಳು , ಬ್ಯಾಟರಿ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ