ಕಾರ್ಕಳ, ಮೇ.20 (DaijiworldNews/PY): ನಿಟ್ಟೆ ಎಂಬಿಎ ಕಾಲೇಜು ಪರಿಸರದಲ್ಲಿ ಗಾಂಜಾ ಮಾರಾಟ ಜಾಲದ ತಂಡದದವರನ್ನು ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ ನೇತೃತ್ವದಲ್ಲಿ ಪೊಲೀಸ್ ಬಂಧಿಸಿದ್ದಾರೆ.
ಬಂಧಿತರನ್ನು ನಿಟ್ಟೆ, ಕೆಮ್ಮಣ್ಣು ನಿವಾಸಿ ರಾಯ್ ಸನ್ (23), ಮಿಯ್ಯಾರು, ಕಜೆ ನಿವಾಸಿ ಸಂದೇಶ್ ಶೆಣೈ (20) ಕಾಬೆಟ್ಟು ನಿವಾಸಿ ವಿಘ್ನೇಶ್ ಪೈ (20), ಕಾರ್ಕಳದ ವಂಡರ್ಸ ಕಾಂಪ್ಲೆಕ್ಸ್ ಮಾರ್ಕೆಟ್ ರಸ್ತೆ ನಿವಾಸಿ ವಿಶಾಲ್ ಹೆಗ್ಡೆ (20) ಎಂದು ಗುರುತಿಸಲಾಗಿದೆ.
ಬಿಳಿ ಬಣ್ಣದ ಕಾರಿನಲ್ಲಿ ಗಾಂಜಾ ಸೇದುತ್ತಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
15 ಗ್ರಾಮ್ ಮಾದಕ ವಸ್ತು ಗಾಂಜಾ, 6 ಮೊಬೈಲ್, 3 ಓಸಿಎಂ ಸಿಮ್ ಸ್ಲಿಪ್, ಕಾರು ಹಾಗೂ 2000 ರೂ. ನಗದನ್ನು ಆರೋಪಿಗಳಿಂದ ಪೊಲೀಸರು ವಶ ಪಡಿಸಿದ್ದಾರೆ.
ಆರೋಪಿಗಳ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.