ಮಂಗಳೂರು, ಮೇ.20 (DaijiworldNews/PY): "ಸಾಲ ಮಾಡಿದ ಮೀನುಗಾರರ ಸಾಲ ಮನ್ನಾ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೀನುಗಾರರಿಗೆ ಸಹಾಯ ಮಾಡಬೇಕಿದೆ" ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, "ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪ್ಯಾಕೇಜ್ನಲ್ಲಿ ಮೀನುಗಾರರಿಗೆ ಏನೂ ಇಲ್ಲ. ಮೀನುಗಾರರಿಗೆ ಆರ್ಥಿಕ ಪ್ಯಾಕೇಜ್ನಲ್ಲಿ ಏನೂ ಘೋಷಣೆ ಮಾಡಿಲ್ಲ. ಸಾಲ ಮಾಡಿದ ಮೀನುಗಾರರ ಸಾಲ ಮನ್ನಾ ಮಾಡಲು ಪ್ರಯತ್ನಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೀನುಗಾರರಿಗೆ ಸಹಾಯ ಮಾಡಬೇಕಿದೆ" ಎಂದಿದ್ದಾರೆ.
"ನಾನು, ಅಭಯಚಂದ್ರ ಜೈನ್, ಮಿಥುನ್ ರೈ ಕೆಲಸ ಮಾಡಿ ಸೋತಿದ್ದೇವೆ. ಬಿಜೆಪಿ ಮತೀಯ ಮಾರ್ಗದಲ್ಲಿ ಮೀನುಗಾರರ ಮತ ಪಡೆದಿದೆ" ಎಂದು ಆರೋಪಿಸಿದ್ದಾರೆ.